ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮದ ಇತಿಹಾಸ ಪ್ರಸಿದ್ಧ ಹೇಮಾವತಿ ನದಿಮೂಲದ ಮಹಾಗಣಪತಿ ಉತ್ಸವವು ಫೆ. 2ರಂದು ನಡೆಯಲಿದೆ. ಉತ್ಸವದ ಅಂಗವಾಗಿ ಗಣಪತಿ ದೇವಾಲಯದಲ್ಲಿ ಫೆ. 1ರಂದು ಸಂಜೆ ಸತ್ಯನಾರಾಯಣಸ್ವಾಮಿ ಪೂಜೆ ನಡೆಯಲಿದ್ದು, 2 ರಂದು ಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪೂಜೆ ಹಾಗೂ ಮಹಾಗಣಪತಿ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಉತ್ಸವದ ಅಂಗವಾಗಿ ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಮಿತಿ ಕಾರ್ಯದರ್ಶಿ. ಎಂ.ವಿ .ಜಗದೀಶ್ ತಿಳಿಸಿದ್ದಾರೆ.
Kshetra Samachara
30/01/2025 09:24 pm