ಸಿದ್ದಾಪುರ : ಮನೆಯ ಹಿತ್ತಲಿನ ಸುತ್ತಮುತ್ತಲಿನಲ್ಲಿ ಕಳೆದ 15 ದಿನಗಳಿಂದ ಓಡಾಡುತ್ತ ಮನೆಯವರಿಗೆ ಭಯ ಹುಟ್ಟಿಸಿದ ನಾಗರಹಾವುನ್ನ ಮಂಜು ಅಪ್ಪಿನಬೈಲ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಘಟನೆ ತಾಲೂಕಿನ ಕನ್ನಳ್ಳಿಲಿ ನಡೆದಿದೆ.
ಇಲ್ಲಿನ ನಿವಾಸಿ ಮಾರುತಿ ನಾಯ್ಕ ಎನ್ನುವವರ ಮನೆಯಲ್ಲಿ ಹಿತ್ತಲಿನಲ್ಲಿ ಹಾವು ಓಡಾಡಿಕೊಂಡಿತ್ತು, ಮನೆಯವರು ಹಾವನ್ನ ಓಡಿಸಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿದರು ಅದು ಹೋಗದೆ ಅಲ್ಲೇ ಅವಿತುಕೊಂಡಿತ್ತು, ಯಾವಾಗಲಾದರೂ ಯಾರಿಗಾದರೂ ಅಪಾಯ ಮಾಡಬಹುದು ಎಂದು ಮಂಜು ಅಪ್ಪಿನಬೈಲ್ಅ ವರನ್ನ ಕರೆಯಿಸಿ ಸುರಕ್ಷಿತವಾಗಿ ಹಿಡಿಸಿ ಕಾಡಿಗೆ ಬಿಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Kshetra Samachara
22/10/2024 04:31 pm