ಕಾರವಾರ : ಮೈಸೂರು ರಾಜ್ಯವು, ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನಲೆ ರಾಜ್ಯದಾದ್ಯಂತ ಸಂಚರಿಸಲಿರುವ "ಕರ್ನಾಟಕ ಸಂಭ್ರಮ 50 ಜ್ಯೋತಿ ರಥಯಾತ್ರೆಯು ಮಂಗಳವಾರ ಕಾರವಾರವನ್ನು ತಲುಪಿತು.
ನಗರದ ಪ್ರವೇಶ ದ್ವಾರದ ಮೂಲಕ ಸ್ಥಳೀಯ ಕಲಾವಿದರಿಂದ ಮೆರವಣಿಗೆಯಲ್ಲಿ ಹೊರಟ ಮೆರವಣಿಗೆಯು ಸವಿತಾ ವೃತ್ತ, ಕಾಜುಬಾಗ ರಸ್ತೆ, ಪಿಕಳೆ ರಸ್ತೆ, ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿತು. ಕನ್ನಡಪರ ಸಂಘಟನೆಗಳು ಹಾಗೂ ಜಿಲ್ಲಾಡಳಿತದಿಂದ ಕನ್ನಡಾಂಬೆಗೆ ಪೂಜೆ ನಡೆಯಿತು.
ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಉಪ ವಿಭಾಗಾಧಿಕಾರಿ ಕನಿಷ್ಕ, ತಹಶೀಲ್ದಾರ ನಿಶ್ಚನ ನರೋನಾ ಹಾಗೂ ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ ಅವರು ಪೂಜೆ ಸಲ್ಲಿಸಿದರು.
PublicNext
22/10/2024 04:19 pm