ಅಂಕೋಲಾ: ಅಂಕೋಲಾ ತಾಲೂಕಿನಲ್ಲಿ ದಸರಾ ಸಂಭ್ರಮ ಮನೆಮಾಡಿದ್ದು ದುರ್ಗಾದೇವಿ ವಿಸರ್ಜನೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ನೆರೆದಿತ್ತು.
ವಿಸರ್ಜನಾ ಮೆರವಣಿಗೆಯಲ್ಲಿ ವಿಶೇಷ ಸ್ಥಬ್ಧ ಚಿತ್ರಗಳು ಗಮನ ಸೆಳೆದವು. ಪೌರಣಿಕ ಹಿನ್ನಲೆ, ಸಾಮಾಜಿಕ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳನ್ನು ಸಾರ್ವಜನಿಕರು ವೀಕ್ಷಿಸಿದರು. ಇತ್ತೀಚೆಗೆ ಹೆದ್ದಾರಿಯಲ್ಲಿ ನಡೆಯುತ್ತಿರುವ ದನಗಳ್ಳರ ಹಾವಳಿ, ಸರಕಾರದ ಶಕ್ತಿ ಯೋಜನೆ ಕುರಿತು ಅಣುಕು ಪ್ರದರ್ಶನ, ನಾಗಾಸಾಧುಗಳ ವೇಷದಲ್ಲಿರುವ ಯುವಕರ ದಂಡು ಕಂಡು ಪ್ರೇಕ್ಷಕರು ಸಂತಸಪಟ್ಟರು.
PublicNext
13/10/2024 08:37 pm