ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಶಕ್ತಿಪೀಠವಾದ ಶಿರಸಿಯ ಶ್ರೀ ಮಾರಿಕಾಂಬಾ ದೇವಾಲುದಲ್ಲಿ ವಸ್ತ್ರ ಸಂಹಿತೆ ಮಾಡಲಾಗಿದೆ.
ದೇವಾಲಯದಲ್ಲಿ ಪ್ರವೇಶ ಮಾಡಲು ಭಾರತೀಯ ಸಂಸ್ಕೃತಿಯ ಉಡುಗೆಯನ್ನೇ ತೊಟ್ಟು ಬರಬೇಕಿದೆ. ನವರಾತ್ರಿಯ ಹಿನ್ನೆಲೆ ದೇವಿಯ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಈ ನಿಯಮ ಜಾರಿಮಾಡಲಾಗಿದೆ. ಈ ಬಗ್ಗೆ ಮುಜರಾಯಿ ಇಲಾಖೆ ಕೂಡ ಆದೇಶ ಜಾರಿ ಮಾಡಿತ್ತು. ಈ ಹಿಂದೆ ಜಿಲ್ಲೆಯ ಗೋರ್ಣದ ಮಹಾಬಲೇಶ್ವರ ದೇವಾಲಯದಲ್ಲಿಯೂ ವಸ್ತ್ರ ಸಂಹಿತೆ ಜಾರಿ ಮಾಡಲಾಗಿತ್ತು.
Kshetra Samachara
12/10/2024 02:22 pm