ಸಿದ್ದಾಪುರ : ಸಾಕು ನಾಯಿಯನ್ನು ಬೇಟೆಯಾಡಲು ಮನೆಯಂಗಳ ಬಂದ ಚಿರತೆಯಿಂದಾಗಿ ಮನೆಯವರು ಭಯ ಭೀತರಾಗಿ ಪಟಾಕಿ ಸಿಡಿಸಿ,ಸಪ್ಪಳವಾಗುವ ಬಂದೂಕಿನಿಂದ ಈಡು ಹಾರಿಸಿ ಚಿರತೆ ಓಡಿಸಿದ ಘಟನೆ ತಾಲೂಕಿನ ಮಗೆಗಾರ್ ನ ಆರ್ ಎಸ್ ಹೆಗಡೆ ಎನ್ನುವವರ ಮನೆಯಲ್ಲಿ ನಡೆದಿದೆ. ಚಿರತೆ ನಾಯಿ ಬೇಟೆಗೆ ಬಂದ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಮೊದಲು ಮನೆಯಲ್ಲಿದ್ದ ಮೂರು ನಾಯಿಗಳನ್ನು ಬೇಟೆಯಾಡಿ ನಾಲ್ಕನೇ ನಾಯಿಯನ್ನು ಬೇಟೆಯಾಡಲು ಚಿರತೆಯು ಮನೆ ಅತ್ತ ಬಂದಿತ್ತು ನಾಯಿಯು ಬೋನಿನಲ್ಲಿ ಇರುವುದನ್ನು ನೋಡಿದ ಚಿರತೆಯು ಬೋನಿನ ಸುತ್ತ ತಿರುಗಾಡಿದೆ ಈ ಸಂದರ್ಭದಲ್ಲಿ ನಾಯಿ ಹೆದರಿಕೊಂಡು ಜೋರಾಗಿ ಕಿರುಚಿಕೊಂಡಿದೆ ಮನೆಯವರು ಚಿರತೆಯನ್ನು ಓಡಿಸಲು ಪಟಾಕಿ ಸಿಡಿಸಿ ನಂತರ ಚಿಂತೆಯು ಒಡದೆ ಇರುವುದರಿಂದ ಮತ್ತೆ ಸಪ್ಪಳವಾಗುವ ಬಂದೂಕಿನಿಂದ ಈಡು ಹಾರಿಸಿ ಚಿರತೆಯನ್ನು ಓಡಿಸಿದ್ದಾರೆ.
ಚಿರತೆ ದಾಳಿಯಿಂದ ಸಂಜೆಯ ವೇಳೆಗೆ ಮನೆಯಿಂದ ಆಚೆ ಓಡಾಡಲು ಭಯಭೀತ ವಾತಾವರಣ ನಿರ್ಮಾಣವಾಗಿದ್ದು ಕೂಡಲೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಒತ್ತಾಯ ಮಾಡಿದ್ದಾರೆ.
ಈಗಾಗಲೇ ಅರಣ್ಯ ಇಲಾಖೆಯವರಿಗೆ ದೂರವಾಣಿ ಸಂಪರ್ಕ ಮಾಡಿದ್ದು ಅರಣ್ಯ ಇಲಾಖೆಯವರು ಬೋನ್ ನೀಡುವುದಾಗಿ ಭರವಸೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.
Kshetra Samachara
13/10/2024 10:10 pm