ಬೆಳಗಾವಿ: ಕಿತ್ತೂರು ಚನ್ನಮ್ಮನ ಉತ್ಸವವನ್ನು ಪ್ರಪ್ರಥಮ ಬಾರಿಗೆ ಬೆಳಗಾವಿಯಲ್ಲಿ ಆಚರಣೆ ಮಾಡಲಾಗುತಿದ್ದು, ಅಕ್ಟೋಬರ್22 ರಂದು ಬೆಳಗಾವಿಯಲ್ಲಿ ಅದ್ಧೂರಿ ರಸ ಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ್ ಅವರು ಮಾಹಿತಿ ನೀಡಿದ್ದಾರೆ.
200 ನೇ ಚನ್ಮಮ್ಮ ಕಿತ್ತೂರು ವಿಜಯೋತ್ಸವದ ಸಂಭ್ರಮದ ನಿಮಿತ್ತ ಅಂದು ಸಾಯಂಕಾಲ 4 ಗಂಟೆಗೆ ಕಾರ್ಯಕ್ರಮ ಆರಂಭ ಆಗಲಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಸಾಧು ಕೋಕಿಲ ಹಾಗೂ ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲ್ ಶೋ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ಸರಿಗಮಪ ತಂಡ, ಅನೇಕ ನೃತ್ಯ ತಂಡಗಳು ಕಾರ್ಯಕ್ರಮದಲ್ಲಿ ಗಮನ ಸೆಳೆಯಲಿದ್ದಾರೆ. ಜೊತೆಗೆ ಫೈಯರ್ ಶೋ, ಷ್ಯಾಡೋ ಶೋ ಕೂಡಾ ಆಯೋಜನೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಪಸ್ಥಿತರಿರುವಂತೆ ಶ್ರವಣ ನಾಯಕ್ ಅವರು ಮನವಿ ಮಾಡಿದ್ದಾರೆ.
PublicNext
16/10/2024 12:34 pm