ಬೈಲಹೊಂಗಲ: ತಾಲೂಕಿನ ದೇಶನೂರ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಭೇಟಿ ನೀಡಿ, ಶಿಥೀಲಗೊಂಡಿರುವ ಆಸ್ಪತ್ರೆ ವೀಕ್ಷಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಆಸ್ಪತ್ರೆ ಕಟ್ಟಡ ಸರಿಪಡಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸರಿಪಡಿಸಲು ಅದೇಶಿಸಿದರು. ವೈದ್ಯರ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಸಭೆ ಮಾಡಿ, ಚರ್ಚಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಹಿರಿಯ ಮುಖಂಡರಾದ ದೀಪಕಗೌಡ ಪಾಟೀಲ, ಪ್ರಕಾಶ ಮುಂಗರವಾಡಿ, ವಿಶಾಲಗೌಡ ಪಾಟೀಲ,ಶಿವಣ್ಣ ಹುನಕುರ, ಅಬ್ಬಾಸ ಅಲಿ ಫಿರಾಜಾದೆ,ನಿಂಗಪ್ಪ ತಳವಾರ, ಸದೆಪ್ಪ ಕಮತಗಿ,ಅಣ್ಣಪ್ಪ ಕಡಕೋಳ, ಆಯುಭಖಾನ ಗಣಾಚಾರಿ,ಶಾಮ ರಾಮಣ್ಣವರ, ಶ್ರೀಮತಿ ದಾನಮ್ಮ ಹರಕುಣಿ ಸೇರಿದಂತೆ, ಆಸ್ಪತ್ರೆ ವೈದ್ಯರು, ಸಿಬ್ಬಂದಿ,ಆಶಾ ಕಾರ್ಯಕರ್ತರು, ದೇಶನೂರ ಗ್ರಾಮದ ಮುಖಂಡರು,ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
16/10/2024 05:37 pm