ಬೈಲಹೊಂಗಲ : ಪಟ್ಟಣದ ಬಾಗವಾನ ಚಾಳದಲ್ಲಿರುವ ಮಹಾನ್ ಸೂಫಿಯಾಗಿರುವ ಹಜರತ್ ಮೆಹಬೂಬಸುಭಾನಿ ದರ್ಗಾದಲ್ಲಿ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ನಡೆಯಿತು.
ಅಹಲೆ ಸುನ್ನತಲ್ ಜಮಾತ ಸಂಘದ ನೇತೃತ್ವದಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಭಕ್ತಿಯಿಂದ ಹಜರತ್ ಮೆಹಬೂಬಸುಭಾನಿ ದರ್ಗಾದಲ್ಲಿ ಗೌರವ ಸಮರ್ಪಿಸಿ ವಿಶೇಷ ಪೂಜೆ-ಪುನಸ್ಕಾರ ಸಲ್ಲಿಸಿದರು.
ಮುಸ್ಲಿಂ ಧರ್ಮ ಗುರು ಲತೀಫ ಪೀರಾ ತೊಲಗಿ ಮಾತನಾಡಿ, ಭಾರತ ದೇಶ ಮಹಾನ್ ಯೋಗಿಗಳು, ಸೂಫಿ, ಸಂತರು ನಡೆದಾಡಿದ ಪುಣ್ಯ ನೆಲವಾಗಿದೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು. ರೈತರಿಗೆ ಮಳೆ, ಬೆಳೆ ಚನ್ನಾಗಿ ಬರುವಂತೆ, ದೇಶದ ಸೈನಿಕರಿಗೆ ಇನ್ನಷ್ಟು ಶಕ್ತಿ ಕರುಣಿಸಲೆಂದು ಹಾಗೂ ನಾಡಿಗೆ ಯಾವುದೇ ಕಂಟಕ, ಯಾವುದೇ ಆಪತ್ತು ಬಾರದಂತೆ ಹಾಗೂ ಸಮಸ್ತರಿಗೂ ಆರೋಗ್ಯ, ಆಯುಸ್ಸು, ಐಶ್ವರ್ಯ ಕರುಣಿಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳಬೇಕೆಂದು ಕರೆ ನೀಡಿದರು.
ಇದೇ ವೇಳೆ ವಿಶೇಷ ಪ್ರಾರ್ಥನೆ ಹಾಗೂ ಮಹಾಪ್ರಸಾದ ನಡೆಯಿತು. ಬಾಗವಾನ ಚಾಳದಲ್ಲಿರುವ ಇಸ್ಮಾಯಿಲ್ ಬಡೇಘರ ಅವರ ಮನೆಯಿಂದ ಗಂಧ ಮೆರವಣಿಗೆ ಮೂಲಕ ದರ್ಗಾಕ್ಕೆ ತಂದು ಸಮರ್ಪಿಸಲಾಯಿತು. ಅನೇಕರು ಗಣ್ಯರು ಭಾಗವಹಿಸಿ ಮೆಹಬೂಬಸುಭಾನಿ ಅವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಅಹಲೆ ಸುನ್ನತಲ್ ಜಮಾತ ಸಂಘದ ಸದಸ್ಯರು, ನೂರಾರು ಜನ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
Kshetra Samachara
15/10/2024 06:33 pm