ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಸೇವಾ ನಿವೃತ್ತಿಯಾಗಿ ಬಂದ ಸೈನಿಕನಿಗೆ ಅದ್ಧೂರಿ ಸ್ವಾಗತ

ಬೈಲಹೊಂಗಲ: ಭಾರತೀಯ ಸೇನೆಯಲ್ಲಿ ಸುಧೀರ್ಘ 24 ವರ್ಷಗಳ ಕಾಳ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರು ಗ್ರಾಮಕ್ಕೆ ಮರಳಿದ ಯೋಧ ಯಲ್ಲಪ್ಪ ಬುಡರಕಟ್ಟಿಯವರನ್ನು ದೊಡವಾಡ ಗ್ರಾಮದ ಮಾಜಿ ಸೈನಿಕರ ಸಂಘ ಹಾಗೂ ಗ್ರಾಮದ ಗುರು ಹಿರಿಯರ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಗ್ರಾಮದ ಕೊಪ್ಪದ ಅಗಸಿಯ ಮಹಾದ್ವಾರದದ ಬಳಿ ಯೋದ ಯಲ್ಲಪ್ಪ ಅವರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಯೋಧರ ಮತ್ತು ಗ್ರಾಮಸ್ಥರು ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರಯ ಸೈನಿಕನಾಗಿ ದೇಶ ಕಾಯುವುದು ಹೆತ್ತ ತಾಯಿಯ ಸೇವೆ ಮಾಡಿದಷ್ಟೇ ಸಮಾನವಾಗಿದೆ. ಇಂದಿನ ಯುವಕರು ಹೆಚ್ಚು ಹೆಚ್ಚು ಸೈನ್ಯಕ್ಕೆ ಸೇರಬೇಕು ಈ ಮೂಲಕ ತಾಯಿ ನಾಡ ಸೇವೆಗೆ ಎಂಥ ತ್ಯಾಗಕ್ಕೂ ಮುಂದಾಗುವ ಶೌರ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮದ ಮಾಜಿ ಸೈನಿಕರ ಸಂಘಟನೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/10/2024 04:45 pm

Cinque Terre

3.74 K

Cinque Terre

0

ಸಂಬಂಧಿತ ಸುದ್ದಿ