ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಮಶಾನದಾಗ ಇಂದಿರಾ ಕ್ಯಾಂಟೀನ್ ಕಟ್ಟಿಸಿದ MLA ಅಬ್ಬಯ್ಯ - ಇಲ್ಲಿ ಯಾರ ಊಟಾ ಮಾಡ್ತಾರೋ ಅಂದ ಮುತಾಲಿಕ್..!

ಹುಬ್ಬಳ್ಳಿ: ನಮಸ್ಕಾರ ರೀ ಹುಬ್ಬಳ್ಳಿ ಮಂದಿ ಹೇಂಗ್ ಅದಿರಿ ನಿವೇನ ಬಿಡ್ರಿ ಆರಾಮ್ ಇರ್ತೀರಿ ಗಣಪ್ಪತಿ ಹಬ್ಬಾ ಮಾಡ್ಕೊಂತ್ ಆರಾಮ್ ಇರ್ತೀರಿ. ನಿಮಗಂತ ಒಂದ ಸ್ಪೆಷಲ್ ಸ್ಟೋರಿ ತಂದೇವಿ ನೋಡ್ರಿ. ನಿವೇನ.... ಕೆಲ್ಸಾ ಮಾಡ್ರಿ ಅದಕ್ಕೊಂದು ರೀತಿ ರಿವಾಜ್ ಅನ್ನೋದ್ ಇರ್ತೇತಿ. ಎಲ್ಲಿ ಏನ ಮಾಡಿದ್ರ ಚೆಂದ್ ಅನ್ನು ಕಾಮನ್ ಸೆನ್ಸ್ ನಮಗ ಇರಬೇಕ್. ಆದ್ರ ಕೆಲವು ಸಲಾ ಆ..ಸೆನ್ಸ್ ಇಲ್ಲ ಅಂದ್ರ ನಾನ್ಸೇನ್ಸ್ ಹೇಂಗ್ ಅಕ್ಕೇತಿ ಅನ್ನದಕ್ಕ ಈ ಸ್ಟೋರಿ ಏಕ್ಸಾಂಪಲ್ ಐತಿ ನೋಡ್ರಿ. ಇವತ್ತ ಈ ಸುದ್ದಿ ನೋಡಿದ್ರ ಇದೇನೋ ಮಾರಾಯ ಹುಚ್ಚರ ಆಟ ಅಂತಾ ನೀವ ಅಂತೀರಿ ಯಾಕಂದ್ರ ಈ ಸ್ಟೋರಿನ ಹಂಗ್ ಐತಿ.

ಹೀಂಗ ಪ್ರಮೋದ್ ಮುತಾಲಿಕ್ ಅಜ್ಜಾರು ಬಂದ ಮಂಟೂರ್ ರೋಡ್ನ್ಯಾಗಿನ್ ಇಂದಿರಾ ಕ್ಯಾಂಟೀನ್ ನೋಡಾಕುಂತಿದ್ದ ನೋಡಿದ್ರ ಮುತಾಲಿಕ್ ಅವರ ಇಂದಿರಾ ಕ್ಯಾಂಟೀನ್‌ಗೆ ಬಂದ ರೈಸ್ ಸಾಂಬಾರ್ ತಿನ್ನಾಕ್ ಬಂದಾರ್ ತಿಳಕೊಂಡಿದ್ರ ಅದ ತಪ್ಪ. ಬದಲಿಗೆ ಈ ಇಂದಿರಾ ಕ್ಯಾಂಟೀನ್ ಕೆಡವತೀನಿ ಅಂತಾ ಬಂದಾರ್, ಯಾಕ್ ಅಂದ್ರ ಈ ಇಂದಿರಾ ಕ್ಯಾಂಟೀನ್ ಹಿಂದೂಗಳ ಸುಡಗಾಡ್ ಗಟ್ಟ್ಯಾಗ್ ಕಟ್ಟ್ಯಾರ್ ಅಂತಾ ಹೀಂಗಾಗಿ, ಹೆಣಾ ಸುಡುವಲ್ಲಿ ಊಟ ತಯಾರ್ ಮಾಡು ಇಂದಿರಾ ಕ್ಯಾಂಟೀನ್ ಕಟ್ಟಿಸಿದ MLA ಅಬ್ಬಯ್ಯ ಅವರಿಗೆ ಬಾಯಿಗೆ ಬಂದಂಗ ಬೈಯದಾರ್ ನೋಡ್ರಿ ಮುತಾಲಿಕ್ ಅಜ್ಜಾರ್.

ಇನ್ನ ಮಂಟೂರ್ ರೋಡ್ ನ್ಯಾಗ್ ಈ ಸುಡಗಾಡ್ ಗಟ್ಟಿ 8 ಏಕರೆದಾಗ್ ಇತ್ತ ಹೊಸ ರೋಡ್ ಮಾಡು ಸಂಬಂಧ ಈಗಾಗಲೇ 2 ಏಕರೆ ಹೋಗಿ 6 ಎಕರೆ ಅಷ್ಟ ಉಳದೇತಿ ಅಂತಾರದಾಗ್. ಹೋಗಿ ಹೋಗಿ ಸುಡಗಾಡ್ ಗಟ್ಟ್ಯಾಗ್ ಇಂದಿರಾ ಕ್ಯಾಂಟೀನ್ ಮಾಡು ನೆಪದಾಗ ಈ ಸುಡಗಾಡ್ ಗಟ್ಟಿ ಜಾಗಾನೂ ಗುಳುಂ ಮಾಡಬೇಕ ಅಂತಾ ಈ ಪ್ಲ್ಯಾನ್ ಮಾಡ್ಯಾರ್ ನೋಡ್ರಿ ಅಂತಾರ್ ಬಿಜೆಪಿಯವರು.

ಶಾಸಕ ಅಬ್ಬಯ್ಯವರ ಕಾರ್ಪೊರೇಷನ್ ಕಮಿಷನರ್ ಈಶ್ವರ್ ಉಳ್ಳಾಗಡ್ಡಿ ಸಾಹೇಬ್ರು ಹೋಗಿ ಹೋಗಿ ಸುಡಗಾಡ್ ಗಟ್ಟ್ಯಾಗ್ ಈ ಇಂದಿರಾ ಕ್ಯಾಂಟೀನ್ ಮಾಡು ಪ್ಲ್ಯಾನ್ ನಿಮ್ಮ ತಲ್ಯಾಗ್ ಹೇಂಗ್ ಹೋತು ಅಂತಾ ನಮಗ ತಿಳಿವಲ್ತ್, ಒಂದ ವೇಳೆ ನೀವು ಹಂಗು ಹೀಂಗೂ ಮಾಡಿ ಇಂದಿರಾ ಕ್ಯಾಂಟೀನ್ ಮಾಡಿದ್ರಿ ಅಂದ್ರು ಆ ಸುಡಗಾಡ್‌ಗಟ್ಟ್ಯಾಗ್ ಹೋಗಿ ಯಾವ ಉನ್ನಬೇಕರೀ ಪಾ....ಅನ್ನುದ್ ನಮಗೂ ತಲ್ಲ್ಯಾಗ್ ಹುಳಾ ಬಿಟ್ಟಂಗ್ ಆಗೇತಿ ನೋಡ್ರಿ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2024 05:51 pm

Cinque Terre

67.4 K

Cinque Terre

27

ಸಂಬಂಧಿತ ಸುದ್ದಿ