ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಹೃದಯ ಭಾಗವಾದ ಬಂಕಾಪುರ ಚೌಕ್ನಲ್ಲಿ ಅಪಾಯಕಾರಿ ರಸ್ತೆ ಗುಂಡಿಯೊಂದು ಬಾಯ್ತೆರೆದು ಬಲಿಗಾಗಿ ಕಾಯುತ್ತಿದೆ. ಈ ಸ್ಥಳೀಯರಲ್ಲದ ಹೊಸಬರು ಬಂದರೆ ಅಂಥವರಿಗೆ ಅಪಾಯ ಗ್ಯಾರಂಟಿ. ಬೈಕ್ ಸವಾರರು ಗುಂಡಿ ಮೇಲೆ ಹೋದರೆ ಪಕ್ಕದಲ್ಲಿನ ಚರಂಡಿಗೆ ಬೀಳೋದು ಪಕ್ಕಾ.
ಇನ್ನು ರಸ್ತೆ ಪಕ್ಕದಲ್ಲೇ ಅಪಾಯಕ್ಕೆ ಆಹ್ವಾನ ನೀಡುವಂತೆ ಇರುವ ಈ ಚರಂಡಿ ಹೂಳು ತುಂಬಿ ಬ್ಲಾಕ್ ಆಗಿದೆ. ಇದರಿಂದ ಮಳೆ ಬಂದಾಗ ಅಕ್ಕಪಕ್ಕದ ಅಂಗಡಿಗಳಿಗೆ ಚರಂಡಿ ನೀರು ನುಗ್ಗುತ್ತಿದೆ. ಸ್ಥಳೀಯರು ಅನೇಕ ಬಾರಿ ಈ ಅಪಾಯಕಾರಿ ಚರಂಡಿ ಬಗ್ಗೆ ಪಾಲಿಕೆ ವಲಯ ಆಯುಕ್ತರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಶಾಲಾ ಮಕ್ಕಳು ಕೂಡ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಪಾಯ ಸಂಭವಿಸುವ ಮುನ್ನ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಈ ಚರಂಡಿಯ ಹೂಳೆತ್ತಿಸಿ ಮೇಲೆ ಸ್ಲ್ಯಾಬ್ ಹಾಕಿಸಬೇಕಿದೆ.
ವಿಡಿಯೋ ಜರ್ನಲಿಸ್ಟ್ ಗಜಾನನ್ ಹೂಗಾರ್ ಜೊತೆ ನಾಗರಾಜ್ ತಳುಗೇರಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
18/09/2024 05:06 pm