ಸಿದ್ದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಸಂಸ್ಥಾನ ತರಳಿ ಮಠದ ಶಿವ ಮಂದಿರ ದೇವಸ್ಥಾನ ಜೀರ್ಣದ್ದಾರಕ್ಕೆ 5 ಲಕ್ಷ ದೇಣಿಗೆ ನೀಡಿದ್ದಾರೆ.
ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ , ತಾಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ.ಅವರು ತರಳಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎನ್. ಡಿ.ನಾಯ್ಕ್, ಕಾರ್ಯದರ್ಶಿ ಎಚ್ ಎಸ್ .ನಾಯ್ಕ್ ಅವರಿಗೆ 5 ಲಕ್ಷ ಡಿ.ಡಿ. ಯನ್ನು ಹಸ್ತಾಂತರ ಮಾಡಿ ಶಿವಮಂದಿರದ ಜೀರ್ಣೋದ್ದಾರ ಕೆಲಸ ಆದಷ್ಟು ಬೇಗ ಸಂಪೂರ್ಣಗೊಂಡು ದೇವಸ್ಥಾನ ಲೋಕಾರ್ಪಣೆ ಆಗಲಿ ಎಂದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎನ್ . ಡಿ ನಾಯ್ಕ್ ಅವರು ತರಳಿ ಮಠದ ಇತಿಹಾಸ ಹಾಗೂ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು.
ಡಿ.ಡಿ ವಿತರಣಾ ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ ಸದಸ್ಯ ಎಂ.ಐ ನಾಯ್ಕ್ , ದಿನೇಶ ನಾಯ್ಕ್ , ದೀಪಕ್ ತರಲಿ, ಎ ಜಿ . ನಾಯ್ಕ್ , ಬಂಗಾರ್ಯ ನಾಯ್ಕ್ , ಸತೀಶ್ ನಾಯ್ಕ್ , ಮೇಲ್ವಿಚಾರಕ ಪ್ರದೀಪ ಎಂ , ಕೃಷಿ ಮೇಲ್ವಿಚಾರಕ ಮಹಾದೇವ ಬಿ, ವಿಮಾ ಸಮನ್ವಯಾಧಿಕಾರಿ ರಾಮಕೃಷ್ಣ , ಸೇವಾಪ್ರತಿನಿಧಿ ಸೋಮಶೇಖರ್, ಒಕ್ಕೂಟ ಅಧ್ಯಕ್ಷ ವೀರಭದ್ರ ಗೌಡ , ಸಂಘದ ಸದಸ್ಯರು , ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
02/02/2025 11:56 am