ಮೈಸೂರು : ಮೈಸೂರಿನಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಮೈಸೂರಿನ ಅಗ್ರಹಾರ, ಕುವೆಂಪುನಗರ, ಸರಸ್ವತಿಪುರಂ, ಅರಮನೆ ಸುತ್ತಾಮುತ್ತಾ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು ಪ್ರಮುಖ ರಸ್ತೆಯಲ್ಲೇ ನೀರು ನಿಂತು ಜನರು ಪರದಾಡಿದ್ದರು. ಮಾತ್ರವಲ್ಲದೆ ಡ್ರೈನೆಜ್ ನೀರು ಸಹ ರಸ್ತೆ ಮೇಲೆ ಹರಿದು ಜನರು ಅದೇ ನೀರಿನಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಯ್ತು.
PublicNext
22/10/2024 08:07 am