ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ರಿಲ್ಯಾಕ್ಸ್ ಮೂಡ್‌ನಲ್ಲಿ 'ಅಭಿಮನ್ಯು'

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಯಶಸ್ವಿಗೊಳಿಸಿದ ಕ್ಯಾಪ್ಟನ್ ಅಭಿಮನ್ಯು ಸದ್ಯಕ್ಕೆ ರಿಲ್ಯಾಕ್ಸ್ ಮೂಡಿನಲ್ಲಿದ್ದಾನೆ.

ಮೊದಲ ಬಾರಿ ಜವಾಬ್ದಾರಿಯನ್ನು ನಿರ್ವಹಿಸಿದ ಅರಣ್ಯ ಅಧಿಕಾರಿ ಡಿಸಿಎಫ್ ಪ್ರಭುಗೌಡ ಯಶಸ್ವಿಯಾಗಿದ್ದಾರೆ. ನಿಜವಾಗಿ ದೊಡ್ಡ ಜವಾಬ್ದಾರಿಯನ್ನು ಮೊದಲ ಬಾರಿಗೆ ಯಶಸ್ವಿಗೊಳಿಸಿದ ತೃಪ್ತಿ ನನಗಿದೆ. ತಾಯಿ ಚಾಮುಂಡೇಶ್ವರಿ ದಯೆಯಿಂದ ಎಲ್ಲಾ ನಿರ್ವಿಘ್ನವಾಗಿ ಸಂಪನ್ನಗೊಂಡಿದೆ. ನಾಳೆ ಗಜ ಪಡೆಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ಬೀಳ್ಕೊಡುಗೆ ಮಾಡಲಾಗುತ್ತದೆ. ಎರಡು ತಿಂಗಳಿಂದ ಗಜ ಪಡೆ ಜೊತೆದ್ದು ಒಂದು ರೀತಿ ಅವಿನಾಭಾವ ಸಂಬಂಧ ಉಂಟಾಗಿತ್ತು.

ಈಗ ಅವುಗಳ ಬೀಳ್ಕೊಡುಗೆ ಮಾಡುವುದಕ್ಕೆ ಬೇಸರವಾಗುತ್ತಿದೆ. ಆದರೂ ಅನಿವಾರ್ಯ ಅವುಗಳ ಕಳುಹಿಸಿಕೊಡಲೇಬೇಕು ಎಂದು ಡಿಸಿಎಫ್ ಪ್ರಭುಗೌಡ ಹೇಳಿದ್ದಾರೆ. ದಸರಾ ಜಂಬೂಸವಾರಿ ಕ್ಯಾಪ್ಟನ್ ಅಭಿಮನ್ಯುವಿನ ಸಾರಥಿಯಾದ ವಸಂತ ಸಂತಸವನ್ನು ಹಂಚಿಕೊಂಡಿದ್ದಾರೆ.

Edited By : Manjunath H D
PublicNext

PublicNext

13/10/2024 02:25 pm

Cinque Terre

32.43 K

Cinque Terre

0

ಸಂಬಂಧಿತ ಸುದ್ದಿ