ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು - ವಾಪಸ್ ಕಾಡಿನತ್ತ ಅಭಿಮನ್ಯು ಅಂಡ್ ಟೀಂ ಪಯಣ.!

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಯಶಸ್ವಿಯಾಗಿ ಮುಗಿಸಿ ಅಭಿಮನ್ಯು ಅಂಡ್ ಟೀಂ ಕಾಡಿನತ್ತ ಹೆಜ್ಜೆ ಹಾಕಿವೆ. ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯಿಂದ ಪೂಜೆ ಸಲ್ಲಿಸಿದ ಬಳಿಕ ಲಾರಿ ಏರಿ ತಮ್ಮ ತಮ್ಮ ಕ್ಯಾಂಪ್‌ನತ್ತ ಗಜಪಡೆಗೆ ಹೆಜ್ಜೆ ಹಾಕಿವೆ.

ಇನ್ನು ಗಜಪಡೆ ತಮ್ಮ ಸ್ವಸ್ಥಾನಕ್ಕೆ ಮರಳುವ ಮುನ್ನ ಲಾರಿ ಏರಿ ಸಾಲಾಗಿ ನಿಂತಿದ್ವು. ಬಳಿಕ ಎಲ್ಲಾ ಆನೆಗಳು ಲಾರಿ ಏರಿದ ಬಳಿಕ ಅರಮನೆ ಮುಂಭಾಗದಿಂದ ಎಲ್ಲಾ ಆನೆಗಳನ್ನ ಆತ್ಮೀಯವಾಗಿ ಪೊಲೀಸರ ಮುಂದಾಳತ್ವದಲ್ಲಿ ಕಳುಹಿಸಿಕೊಡಲಾಯಿತು. ಈ ವೇಳೆ ಸಾರ್ವಜನಿಕರು ತಮ್ಮ‌ಮನೆಯ ಸಿಬ್ಬಂದಿ ಎಂಬಂತೆ ಕಳುಹಿಸುವ ವೇಳೆ ಭಾವುಕರಾದರು.

Edited By : Nagesh Gaonkar
PublicNext

PublicNext

14/10/2024 04:28 pm

Cinque Terre

20.55 K

Cinque Terre

0