ಗದಗ: ಶಕ್ತಿ ಯೋಜನೆ ಜಾರಿ ಆದಾಗಿನಿಂದ ಲಾಗ್ ರೂಟ್ ಹಾಗೂ ಲೋಕಲ್ ಬಸ್ಗಳು ಫುಲ್ ರಶ್ ರಶ್ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಲಕ್ಷ್ಮೇಶ್ವರ ಪಟ್ಟಣವೂ ಹೊರತಾಗಿಲ್ಲ. ಹೀಗೆ ಬಸ್ ಹತ್ತುವಾಗ ನೂಕುನುಗ್ಗಲು ಉಂಟಾಗಿ 15 ವರ್ಷದ ಬಾಲಕಿ ಅಸ್ವಸ್ಥಗೊಂಡ ಘಟನೆ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹೌದು. ಇಂದು ಮಧ್ಯಾಹ್ನ ಎರಡ್ಮೂರು ಗಂಟೆ ಕಳೆದರೂ ಲಕ್ಷ್ಮೇಶ್ವರ ಮಾರ್ಗವಾಗಿ ಗದಗನಿಂದ ಹಾವೇರಿಗೆ ಹೋಗುವ ಬಸ್ಗಳು ಬಂದಿರಲಿಲ್ಲ. ಈ ಮಧ್ಯೆ ಹಾವೇರಿಗೆ ಹೋಗುವ ಬಸ್ ಬರುತ್ತಿದ್ದಂತೆ ಪ್ರಯಾಣಿಕರು ತಾ ಮುಂದು ನಾ ಮುಂದು ಅಂತ ಬಸ್ ಹತ್ತಲು ಮುಂದಾಗಿದ್ದಾರೆ. ಪರಿಣಾಮ ನೂಕುನುಗ್ಗಲು ನಡುವೆ ಸಿಲುಕಿದ ಬಾಲಕಿ ಉಸಿರಾಡಲು ಸಾಧ್ಯವಾಗದೆ ಅಸ್ವಸ್ಥಗೊಂಡು ಬಿದ್ದಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಕೆಲವರು ಬಾಲಕಿಯನ್ನು ಅಲ್ಲಿಂದ ಕರೆದುಕೊಂಡು ಬಂದು ಉಪಚರಿಸಿದ್ದಾರೆ.
PublicNext
21/10/2024 07:27 pm