ನರಗುಂದ: ನರಗುಂದ ತಾಲ್ಲೂಕಿನ ಮುಗನೂರು ಗ್ರಾಮದಲ್ಲಿ ಸ್ಮಶಾನ ಭೂಮಿ ಹಲವಾರು ವರ್ಷಗಳಿಂದ ಮೃತ ದೇಹಗಳನ್ನು ಖಾಸಗಿ ಭೂಮಿಯಲ್ಲೇ ಹೂಳಲಾಗುತ್ತಿದೆ. ಸರಕಾರ ಆದೇಶ ಇದ್ದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಗನೂರು ಗ್ರಾಮದಲ್ಲಿ ಸ್ಮಶಾನ ಭೂಮಿ ಕಾಣೆಯಾಗಿದೆ. ಇದನ್ನು ಹುಡುಕಿಕೊಡಿ ಎಂದು ಕೆ.ಆರ್.ಎಸ್.ಪಕ್ಷ ಜಿಲ್ಲಾ ಅಧ್ಯಕ್ಷ ವಿರನಗೌಡ ಮುಗನೂರು ಆಗ್ರಹಿಸಿದ್ದಾರೆ.
ಈ ಹಿಂದಿನ ತಹಶೀಲ್ದಾರರು ಭೂಮಿ ಇಲ್ಲ ಎಂದು ಮಾಹಿತಿ ನೀಡಿದ್ದರೆ, ಈಗಿನ ತಹಶೀಲ್ದಾರ ಶ್ರೀಶೈಲ ತಳವಾರ ಭೂಮಿ ಇದೆ ಎಂದು ತಿಳಿಸಿದ್ದಾರೆ. ಸ್ಮಶಾನ ಭೂಮಿ ಎಲ್ಲಿದೆ ಎಂಬುದು ನಿಖರವಾಗಿ ತಿಳಿಸಿಲ್ಲ. ಆದ್ದರಿಂದ ಸ್ಮಶಾನ ಭೂಮಿ ಹುಡಕಿಕೊಡಿ ಎಂದು ವೀರನಗೌಡ ಮುಗನೂರು ಆಗ್ರಹಿಸಿದ್ದಾರೆ. ನರಗುಂದ ತಾಲ್ಲೂಕಿನ ಬನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮುಗನೂರು ಗ್ರಾಮದಲ್ಲಿ ಸ್ಮಶಾನ ನಾಪತ್ತೆಯಾಗಿದೆ ಎನ್ನುವುದು ದುರಂತವೇ ಸರಿ.
PublicNext
20/10/2024 02:18 pm