ನರಗುಂದ: ನರಗುಂದ ತಾಲ್ಲೂಕಿನ ಹುಣಶೀಕಟ್ಟಿ ಗ್ರಾಮದ ವಡ್ಡರ ಹಳ್ಳ ಇಂದು ಮಧ್ಯಾಹ್ನ ಸುರಿದ ಮಳೆಗೆ ತುಂಬಿ ಹರಿದಿದೆ. ಪರಿಣಾಮ ಹುಣಶೀಕಟ್ಟಿ ಹಾಗೂ ನರಗುಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಿದೆ. ಉಕ್ಕಿ ಹರಿಯುತ್ತಿರುವ ಹಳ್ಳದ ಮಧ್ಯ ಬೈಕ್ ಸವಾರರು ಹುಚ್ಚು ಸಾಹಸಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ಅತಿಯಾದ ಮಳೆಯಿಂದ ಈ ಅವಾಂತರ ಸೃಷ್ಟಿಯಾಗಿ ಇದೇ ಹಳ್ಳದಲ್ಲಿ ಇಬ್ಬರು ಬೈಕ್ ಸವಾರರು ಕೊಚ್ಚಿಹೋಗಿದ್ದರು. ಹೀಗಾಗಿ ಇಂದು ಕೂಡ ಬೈಕ್ ಸವಾರರು ಹುಚ್ಚು ಸಹಾಸ ಮೆರೆದಿದ್ದಕ್ಕೆ ಸಾರ್ವಜನಿಕರ ಆಕ್ರೋಶಗೊಂಡಿದ್ದಾರೆ.
PublicNext
21/10/2024 06:35 pm