ಗದಗ: ಲಕ್ಷ್ಮೇಶ್ವರ ಸಮೀಪದ ರಾಮಗೇರಿ ಬಸಪೂರ ಹತ್ತಿರ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ನ ಹಿಂದಿನ ಗಾಲಿ ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದು ಅನೇಕರು ಗಾಯಗೊಂಡ ಘಟನೆ ಇಂದು ಮುಂಜಾನೆ ಜರುಗಿದೆ.
ಸವಣೂರ ತಾಲೂಕಿನ ವಡ್ನಿಕೊಪ್ಪ ಗ್ರಾಮದಿಂದ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಸಂಶಿಗೆ ಶೇಂಗಾ ಕೀಳಲು ಹೊರಟಿದ್ದ ಟಾಟಾ ಏಸ್ ಏಕಾಏಕಿ ಹಿಂಬದಿಯ ಟೈಯರ್ ಸ್ಫೋಟಗೊಂಡು ಪಲ್ಟಿಯಾಗಿದೆ. ಅದರಲ್ಲಿದ್ದ ಸುಮಾರು ಹತ್ತು ಹನ್ನೆರಡು ಜನರಲ್ಲಿ ತೀವ್ರ ಗಾಯಗೊಂಡಿದ ಬಸಪ್ಪ ಮ್ಯಾಗೇರಿ ಎಂಬ ವ್ಯಕ್ತಿ ಗದಗ ಜಿ ಮ್ಸ್ಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾನೆ. ಕೈಕಾಲು ಮುರಿದ ನಾಲ್ಕು ಐದು ಜನರಿಗೆ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕ್ಸಿತೆ ನೀಡಲಾಗಿದೆ. ಗಂಭೀರ ಗಾಯಗೊಂಡಿರುವ ನಾಲ್ವರನ್ನು ಜಿಮ್ಸ್ ಗೆ ರವಾನಿಸಲಾಗಿದೆ.
PublicNext
22/10/2024 01:13 pm