ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ಸರ್ಕಾರ ತಕ್ಷಣವೇ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು - ಹಸನ್ ತಹಶೀಲ್ದಾರ್

ಶಿರಹಟ್ಟಿ: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನಾಡಿನ ಸಮಸ್ತ ರೈತಾಪಿ ವರ್ಗವು ಕಷ್ಟದಲ್ಲಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆದು ನಿಂತ ಬೆಳೆಯೆಲ್ಲಾ ಹಾಳಾಗಿದೆ, ಇದರಿಂದಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುವಂತಾಗಿದೆ.

ಹೌದು... ರಾಜ್ಯ ಸರ್ಕಾರವು ತಕ್ಷಣವೇ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು, ಎಂದು ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ವತಿಯಿಂದ ಇಂದು ತಹಶೀಲ್ದಾರ್ ಶಿರಹಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಅರ್ಜುನ ಬಿಡವೆ, ಸುನಿಲ್ ಸರ್ಜಾಪುರ, ಶಿವಾನಂದ ಸುಲ್ತಾನಪುರ, ಸತೀಶ ನರಗುಂದ, ಮುಂತಾದವರು ಹಾಜರಿದ್ದರು.

Edited By : Abhishek Kamoji
Kshetra Samachara

Kshetra Samachara

21/10/2024 02:57 pm

Cinque Terre

9.42 K

Cinque Terre

0

ಸಂಬಂಧಿತ ಸುದ್ದಿ