ಶಿರಹಟ್ಟಿ: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನಾಡಿನ ಸಮಸ್ತ ರೈತಾಪಿ ವರ್ಗವು ಕಷ್ಟದಲ್ಲಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆದು ನಿಂತ ಬೆಳೆಯೆಲ್ಲಾ ಹಾಳಾಗಿದೆ, ಇದರಿಂದಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುವಂತಾಗಿದೆ.
ಹೌದು... ರಾಜ್ಯ ಸರ್ಕಾರವು ತಕ್ಷಣವೇ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು, ಎಂದು ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ವತಿಯಿಂದ ಇಂದು ತಹಶೀಲ್ದಾರ್ ಶಿರಹಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರ್ಜುನ ಬಿಡವೆ, ಸುನಿಲ್ ಸರ್ಜಾಪುರ, ಶಿವಾನಂದ ಸುಲ್ತಾನಪುರ, ಸತೀಶ ನರಗುಂದ, ಮುಂತಾದವರು ಹಾಜರಿದ್ದರು.
Kshetra Samachara
21/10/2024 02:57 pm