ಚಿತ್ರದುರ್ಗ: ರಾಜ್ಯದಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಈ ವಿಚಾರಕ್ಕೆ ಚಳ್ಳಕೆರೆ ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್
ಪ್ರತಿಕ್ರಿಯೆ ನೀಡಿದ್ದಾರೆ.
ಮಳೆ ಬರಲಿ, ಕೆರೆ ತುಂಬಲಿ, ಭೂಮಿ ಕೂಡಾ ನೀರು ಇಂಗಲಿ, ಅಲ್ಲದೆ ಕಾವೇರಿ ನೀರು ತಮಿಳುನಾಡಿಗೆ ಜಾಸ್ತಿ ಹರಿದು ಹೋಗಲಿ, ಮೇಕೆದಾಟು ಯೋಜನೆ ನಮಗೆ ಬರಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ ಮಳೆಯಿಂದ ಬೆಂಗಳೂರಲ್ಲಿ ಅವಾಂತರ ಆಗಿದೆ, ಜನ ಅಂಡರ್ ಗ್ರೌಂಡ್ ಲೆವೆಲ್ನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಮೊದಲು ಮಳೆ ಬರ್ಲಿ ಆಮೇಲೆ ಪರಿಹಾರ ನೋಡೋಣ ಕೇಂದ್ರ ಸರಕಾರ ಪರಿಹಾರ ಕೊಡುತ್ತೆ, ನಾವು ಅದಕ್ಕೆ ಸಹಾಯ ಮಾಡ್ತೀವಿ ಎಂದರು.
PublicNext
21/10/2024 06:08 pm