ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವರಿಗೆ ಜಲಕಂಟಕ

ಚಿತ್ರದುರ್ಗ: ಭಾರಿ ಮಳೆಗೆ ನಾಯಕನಹಟ್ಟಿ ಐತಿಹಾಸಿಕ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಒಳಮಠ ಮಳೆ ನೀರಿನಿಂದ ಜಲಾವೃತವಾಗಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರಗಳಿಂದ ನಿರಂತರ ಮಳೆ‌ ಬೀಳುತ್ತಿದ್ದು ಇನ್ನಿಲ್ಲದ ಅವಾಂತರ ಸೃಷ್ಟಿ ಮಾಡಿದ್ದು ಜಲಪ್ರಳಯ ಉಂಟಾಗಿದೆ. ಚಳ್ಳಕೆರೆ ತಾಲೂಕಿನ ಐತಿಹಾಸಿಕ ನಾಯಕನಹಟ್ಟಿ ಪಟ್ಟಣದ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವರ ಒಳಮಠ ಮಳೆ ನೀರಿನಿಂದ ಸಂಪೂರ್ಣ ಜಲಾವೃತವಾಗಿದೆ.

ನಾಯಕನಹಟ್ಟಿ ಕೆರೆ ಈಗಾಗಲೇ ಭರ್ತಿಯಾಗಿದ್ದು ಕೋಡಿ ಬಿದ್ದು ಹರಿಯುತ್ತಿದೆ. ಇನ್ನೂ ಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೋಡಿ ವೇಗವಾಗಿ ಹರಿಯುತ್ತಿದ್ದು ಆ ನೀರು ಸಂಪೂರ್ಣವಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರ ಒಳ ಮಠ ಪ್ರವೇಸಿಸಿದ್ದು ಒಳ ಮಠ ಸಂಪೂರ್ಣ ಜಲಾವೃತವಾಗಿದ್ದು ಭಕ್ತರು ದೇವರನ್ನ ಕಾಣಲು ಬರದಂತಾದ ದೃಶ್ಯ ಕಂಡು ಬಂದಿದೆ.

Edited By : Ashok M
PublicNext

PublicNext

22/10/2024 11:56 am

Cinque Terre

9.85 K

Cinque Terre

1

ಸಂಬಂಧಿತ ಸುದ್ದಿ