ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಹೊರವಲಯದಲ್ಲಿರುವಂತಹ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಂಪೂರ್ಣವಾಗಿ ಮಳೆ ನೀರು ನಿಂತು ಶಾಲೆಗೆ ಮಳೆ ದಿಗ್ಬಂದನ ಹಾಕಿದೆ.
ರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮದ ಕರೆಯು ಸಹ ಭರ್ತಿಯಾಗಿ ಹರಿಯುತ್ತಿದ್ದು, ಕಳ್ಳ ಕೊಳಗಳಿಂದ ಹರಿದು ಬಂದಂತಹ ನೀರು ನೇರವಾಗಿ ಶಾಲೆಯ ಆವರಣಕ್ಕೆ ನುಗಿದೆ, ಇದರಿಂದ ಶಾಲೆಯೂ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ, ಶಿಕ್ಷಕರು ಶಾಲೆಯ ದಾಖಲಾತಿಗಳನ್ನ ರಕ್ಷಣೆ ಮಾಡಲು ಸ್ವಯಂ ಪ್ರೇರಿತಾಗಿ ನೀರಿಗೆ ಹೇಳಿದ್ದು ದಾಖಲಾತಿಗಳನ್ನ ರಕ್ಷಿಸಿದ್ದಾರೆ.
ಶಾಲೆ ಆರಂಭ ದಿನವೇ ಮಳೆರಾಯ ಶಾಲೆಗೆ ದಿಗ್ಬಂದನ ಹಾಕಿದ್ದು ಶಾಲಾ ಗೆ ವಿದ್ಯಾರ್ಥಿಗಳು ಹೋಗಲು ಹಿಂದೇಟು ಹಾಕುತ್ತಿದ್ದಾರೆ.
PublicNext
22/10/2024 12:11 pm