ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಾಧ್ಯಂತ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಮಳೆ ಅವಾಂತರಕ್ಕೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ. ರಾಮಘಟ್ಟ ಗ್ರಾಮದಲ್ಲಿ ಹಳ್ಳದಾಟುವ ವೇಳೆ ವೃದ್ದ ಕೊಚ್ಚಿ ಹೋಗಿದ್ದು, ಇದೀಗ ಶವ ಪತ್ತೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಘಟ್ಟ ಗ್ರಾಮದ ಹಳ್ಳದಲ್ಲಿ ಈ ಅವಘಡ ಸಂಬವಿಸಿದೆ. ಮೃತ ವೃದ್ದನನ್ನ ರಾಮಘಟ್ಟ ನಿವಾಸಿ ರಾಜಪ್ಪ (70) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆಧನ ಮೇಯಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ವೇಳೆ ಹಳ್ಳದಾಟುವಾಗ ಘಟನೆ ಜರುಗಿದೆ. ಸ್ಥಳಕ್ಕೆ ಚಿಕ್ಕ ಜಾಜೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
Kshetra Samachara
22/10/2024 05:39 pm