ಚಿತ್ರದುರ್ಗ: ಮುಸ್ಲಿಂರು ನಿಜವಾಗಲ್ಲೂ ನಿಮ್ಮ ತಂದೆಗೆ ಹುಟ್ಟಿದ್ದರೆ ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಇಲ್ಲವಾದ್ರೆ ನೀವು ನಮಗೆ ಹುಟ್ಟಿರೋದು ಅಂತ ತಿಳಿದುಕೊಳ್ಳುತ್ತೇವೆ ಎಂದು ಶಾಸಕ ಬಸವನಗೌಡ ಯತ್ನಾಳ್ ಹೇಳಿದ್ದಾರೆ ಎಂದು SDPI ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಆರೋಪಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಪತ್ರಿಕೆ ಭವನದಲ್ಲಿ ಮಾತನಾಡಿದರು ಬಸವನಗೌಡ ಯತ್ನಾಳ ರವರು ನಾಲಾಯಕ್, ಅವಿವೇಕಿ, ತಮ್ಮ ಭಾಷೆಯನ್ನು ಹಿಡಿತವಾಗಿಟ್ಟುಕೊಳ್ಳಲು ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಮುಸ್ಲಿಂ ಗಂಡು ಮಕ್ಕಳು ಮನೆಯಿಂದ ಹೊರಗೆ ಬಂದಾಗ ನಿಮ್ಮ ಹೆಂಡತಿಯರು ಬೇರೊಬ್ಬರ ಜೊತೆಯಲ್ಲಿ ಮಲಗುತ್ತಾರೆ ಎಂದು ಮುಸ್ಲಿಂ ಹೆಣ್ಣು ಮಕ್ಕಳ ಶೀಲದ ಬಗ್ಗೆ ಹಗುರವಾಗಿ ಯತ್ನಾಳ್ ಮಾತನಾಡಿದ್ದಾರೆ.
ಮುಸ್ಲಿಂ ಸಮುದಾಯದವರು ಈ ದೇಶದ ಸಂವಿಧಾನವನ್ನು ಗೌರವಿಸಿ ಸುಮ್ಮನಿದ್ದಾರೆ. ಇಲ್ಲವಾದಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಿದ್ದರು ಎಂದು ಗುಡುಗಿದರು.
PublicNext
22/10/2024 12:20 pm