ಹುಬ್ಬಳ್ಳಿ : ಸುಮಾರು ತಿಂಗಳುಗಳಿಂದ ಹುಬ್ಬಳ್ಳಿಯ ಆನಂದ ನಗರದ ಗೋಡ್ಕೆ ಪ್ಲಾಟ್ ಪ್ರಭಾತ್ ನಗರ ಮಧರ್ ಥೆರೆಸಾ ಸ್ಕೂಲ್ ಹಿಂಭಾಗದಲ್ಲಿ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ನಿವಾಸಿಗಳು ಜನರು ಹೊರಗೆ ಬರಲು ಭಯ ಪಡುತ್ತಿದ್ದಾರೆ.
ಹೌದು ಸುಮಾರು ನಾಲ್ಕೈದು ತಿಂಗಳಿಂದ ಈ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ವಯಸ್ಸಾದವರು, ಚಿಕ್ಕ ಮಕ್ಕಳು ಹೊರಗೆ ಬಂದ್ರೆ ಸಾಕು ಅಟ್ಯಾಕ್ ಮಾಡುತ್ತಿವೆ. ಈಗಾಗಲೇ ಅದೆಷ್ಟೋ ಜನರಿಗೆ ನಾಯಿಗಳು ಕಚ್ಚಿವೆ. ಈ ಬಗ್ಗೆ ಪಾಲಿಕೆಗೆ ತಿಳಿಸಿದ್ರೂ ಏನು ಪ್ರಯೋಜನವಾಗುತ್ತಿಲ್ಲವಂತೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ರು, ಆದ್ರೆ ಈ ಆನಂದ ನಗರದ ಗೋಡ್ಕೆ ಪ್ಲಾಟ್ ದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕೂಡಲೆ ಇದಕ್ಕೆ ಪಾಲಿಕೆ ಅಧಿಕಾರಿಗಳು ಕಡಿವಾಣ ಹಾಕಿ ಜನರಿಗೆ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕಾಗಿದೆ.
Kshetra Samachara
18/10/2024 02:14 pm