ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತುಂಬಿ ಹರಿದ ಗಂಜಿಗಟ್ಟಿ ಹಿರೇಕೆರೆ, ರಸ್ತೆ ಜಲಾವೃತ- ಮಾತು ತಪ್ಪಿದ ಶಾಸಕರು, ಸಂಸದರು

ಕಲಘಟಗಿ: ಇಂದು ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ತಾಲ್ಲೂಕಿನ ಗಂಜಿಗಟ್ಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಿರೇಕೆರೆ ತುಂಬಿ ಹರಿಯುತ್ತಿದ್ದು, ಕೆರೆಗೆ ಹೊಂದಿಕೊಂಡು ಇರುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.

ಸುಮಾರು ಐದು ವರ್ಷಗಳ ಹಿಂದೆ ಇದೇ ರಸ್ತೆಯಲ್ಲಿ ನೀರು ಹರಿಯುತ್ತಿರುವಾಗ ಇದೇ ಗ್ರಾಮದ ಶ್ರೀದೇವಿ ಗಾಣಿಗೇರ ಎಂಬ ಬಾಲಕಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದು, ಮತ್ತೆ ಬಲಿಗಾಗಿ ಈ ಕೆರೆ ಕಾದು ಕೂತಿದೆ.

ಬಾಲಕಿ ಸಾವನ್ನಪ್ಪಿದ್ದಾಗ ಸ್ಥಳಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ರಸ್ತೆಯನ್ನು ಎತ್ತರಕ್ಕೆ ಮಾಡಿಸುವುದಾಗಿ ಭರವಸೆ ನೀಡಿ ಇದುವರೆಗೂ ಇತ್ತ ಕಡೆ ತಿರುಗಿ ನೋಡದೇ ಕೂತಿದ್ದಾರೆ.

ಇನ್ನು, ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಸಂತೋಷ್ ಲಾಡ್ ಕ್ಷೇತ್ರದ ಸಮಸ್ಯೆ ಬಗ್ಗೆ ತಿರುಗಿಯೂ ನೋಡದೆ ಇರೋದು ವಿಪರ್ಯಾಸವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಈಗಲಾದರೂ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸುತ್ತಾರೆಯೇ ಅಥವಾ ಇವರು ಕೂಡ ಸುಳ್ಳು ಭರವಸೆ ನೀಡಿ ಕೈ ತೊಳೆದುಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿ: ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Manjunath H D
Kshetra Samachara

Kshetra Samachara

17/10/2024 08:16 pm

Cinque Terre

10.03 K

Cinque Terre

1

ಸಂಬಂಧಿತ ಸುದ್ದಿ