ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಬಿಗ್‌ ಇಂಪ್ಯಾಕ್ಟ್- ಹಂಚಿನಾಳ ಗ್ರಾಮದ ಜನರ ಕಷ್ಟ ಕೇಳಲು ಬಂದ ಅಧಿಕಾರಿಗಳು

ಹುಬ್ಬಳ್ಳಿ: 1989ರಿಂದ ಇಲ್ಲಿಯವರೆಗೆ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದ ಜನರ ಕಷ್ಟ ಹೇಳ ತೀರದಾಗಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಬೆನ್ನಲ್ಲೇ ತಹಶೀಲ್ದಾರರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರ ಕಷ್ಟವನ್ನು ಆಲಿಸಿದ್ದು, ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಬಿಗ್ ಇಂಪ್ಯಾಕ್ಟ್ ಆಗಿದೆ.

ಹಂಚಿನಾಳ ಗ್ರಾಮದಲ್ಲಿ ಜನರಿಗೆ ಮಳೆ ಬಂದರೇ ಖುಷಿಯಾಗುತ್ತದೆಯೋ ಇಲ್ಲವೋ..? ಅಕ್ಷರಶಃ ಕಣ್ಣೀರಂತೂ ಹಾಕಿಸಿಯೇ ಹೋಗುತ್ತದೆ. ಈ ನಿಟ್ಟಿನಲ್ಲಿ ವಿಸ್ತೃತ ವರದಿಯನ್ನು ಮಾಡುವ ಮೂಲಕ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ದಲಿತ ವಿಮೋಚನಾ ಸಮಿತಿಯ ಸುರೇಶ ಖಾನಾಪುರ, ಕೆಂಚಪ್ಪ ಮಲ್ಲಮ್ಮನವರ ಅವರು ದಲಿತ ಕೇರಿಯ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ‌.

ಮನೆ ಮನೆಗೆ ನುಗ್ಗುವ ನೀರು, ಮನೆಯ ಅಂಗಳ ಮಾತ್ರವಲ್ಲದೆ ಊರಿಗೆ ಊರೇ ಕೆರೆಯಂತಾಗಿರುವ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದ ಪರಿಸ್ಥಿತಿಯನ್ನು ಅಧಿಕಾರಿಗಳು ವೀಕ್ಷಣೆ ಮಾಡಿ ಸರ್ವೇ ಕೂಡ ಮಾಡಿದ್ದಾರೆ. ತಕ್ಷಣವೇ ಈ ಭಾಗದ ಜನರ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯವನ್ನು ಮಾಡಬೇಕಿದೆ.

-ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

18/10/2024 08:17 am

Cinque Terre

8.51 K

Cinque Terre

0

ಸಂಬಂಧಿತ ಸುದ್ದಿ