ನವಲಗುಂದ: ಸತತ ಸುರಿದ ಭಾರೀ ಮಳೆಯಿಂದಾಗಿ ಹಲವು ಕಡೆ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಅನೇಕ ಮನೆಗಳಿಗೆ ಹಾನಿಗೊಳಗಾಗಿವೆ. ಅಲ್ಲದೇ ದೇವಸ್ಥಾನದ ಮೇಲ್ಛಾವಣಿ ಕುಸಿದಿದೆ.
ತಾಲೂಕಿನ ಮೊರಬ ಗ್ರಾಮದಲ್ಲಿ ಪುರಾತನ ಹಿನ್ನಲೆಯುಳ್ಳ ಶ್ರೀ ಯೋಗೇಶ್ವರ ದೇವಸ್ಥಾನವು ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಭಾರೀ ಮಳೆಯಿಂದಾಗಿ ದೇವಸ್ಥಾನದ ಹಿಂಭಾಗದಲ್ಲಿ ಇರುವ ಮೇಲ್ಛಾವಣಿ ಕುಸಿತ ಕಂಡಿದ್ದು, ಮಳೆ ನೀರು ದೇವಸ್ಥಾನಕ್ಕೆ ಬರುತ್ತಿದೆ.
ಮೊರಬ ಗ್ರಾಮದ ಆರಾಧ್ಯ ದೈವವೆಂದೇ ಕರೆಯಲ್ಪಡುವ ಶ್ರೀ ಯೋಗೇಶ್ವರ ದೇವಸ್ಥಾನದ ಮೇಲ್ಛಾವಣಿ ದುರಸ್ತಿ ಕಾರ್ಯ ಬಹು ಬೇಗನೆ ಆಗಲಿ ಎಂಬುದು ಭಕ್ತರ ಆಶಯವಾಗಿದೆ.
- ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
17/10/2024 05:35 pm