ನವಲಗುಂದ: ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಹಿನ್ನೆಲೆ ಮಳೆ ಹಾನಿಯ ಬಗ್ಗೆ ತಿಳಿಯಲು ನವಲಗುಂದ ತಾಲೂಕಿನ ಹಲವು ಕಡೆ ಖುದ್ದು ಫಿಲ್ಡ್ ಗಿಳಿದ ಜಿಲ್ಲಾಧಿಕಾರಿ ದಿವ್ಯಪ್ರಭು.
ಜಿಲ್ಲಾಧಿಕಾರಿ ದಿವ್ಯ ಪ್ರಭುರಿಂದ ಫಿಲ್ಡ್ ಸರ್ವೆ ಕಾರ್ಯ ನವಲಗುಂದ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಸಂಚಾರ ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳದ ಅಕ್ಕಪಕ್ಕದ ಗ್ರಾಮಗಳಿಗೆ ಭೇಟಿ.
ಹಳ್ಳದ ಪ್ರವಾಹದಿಂದ ಆಗಿರೋ ಹಾನಿ ಬಗ್ಗೆ ಮಾಹಿತಿ ಕಲೆ ಹಾಕಿದ ಡಿಸಿ, ಸರ್ಕಾರಕ್ಕೆ ಮಳೆ ಹಾನಿ ವರದಿ ಸಲ್ಲಿಸಬೇಕಿದೆ ಹೀಗಾಗಿ ಖುದ್ದು ನಾನೇ ಬಂದಿರುವೆ ಎಂದು ಜನರಿಗೆ ತಿಳಿಸಿದ ಡಿಸಿ ಇಡೀ ದಿನ ನವಲಗುಂದ ತಾಲೂಕಿನಲ್ಲಿ ಫಿಲ್ಡ್ ಸರ್ವೆ ನಡೆಸಲಿದ್ದೇನೆ ಎಂದರು.
Kshetra Samachara
18/10/2024 02:33 pm