ಚಿತ್ರದುರ್ಗ : ಲೋಕದೊಳಲು ಗ್ರಾಮದ ಗುಡ್ಡದ ಶ್ರೀ ಐತಿಹಾಸಿಕ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ದೇವಾಲಯಕ್ಕೆ ಸೂಕ್ತ ರಸ್ತೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು ಗ್ರಾಮದ ಗುಡ್ಡದ ಮೇಲೆ ನೆಲೆಸಿರುವ ಐತಿಹಾಸಿಕ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ದೇವಾಲಯದ ರಸ್ತೆಯು ಮೊದಲು ಕಾಲು ದಾರಿ ಇತ್ತು ಹೊಸದಾಗಿ ಸರ್ಕಾರದಿಂದ ಬಂಡೆಗಳನ್ನ ಕತ್ತರಿಸಿ ರಸ್ತೆ ಮಾಡಲಾಗಿತ್ತು.
ಆದರೆ ಕಳೆದ ಕೆಲ ದಿನಗಳಿಂದ ಸತತ ಮಳೆ ಬೀಳುತ್ತಿದ್ದು ನೀರಿನ ರಭಸಕ್ಕೆ ಈ ರಸ್ತೆಯ ಮೇಲೆ ಬೃಹತ್ ಗಾತ್ರದ ಬಂಡೆಗಳು ಬಿದ್ದು ರಸ್ತೆ ಹದಗೆಟ್ಟಿದೆ. ಮಳೆ ಹೆಚ್ಚಾಗಿ ಬರುತ್ತಿರುವುದರಿಂದ ಎಲ್ಲಾ ಬಂಡೆಗಳು ನೆಲಕ್ಕೆ ಬೀಳುವ ಸಾಧ್ಯತೆ ಇದ್ದು ಭಕ್ತಾದಿಗಳು ಎಚ್ಚರವಾಗಿ ರಸ್ತೆಯ ಮೇಲೆ ಹೋಗಬೇಕಾಗಿ ಎಂದು ಶ್ರೀ ರಂಗನಾಥ. ಸ್ವಾಮಿ ಭಕ್ತ ಲೋಕೇಶ್ ರವರು ಮನವಿ ಮಾಡಿದ್ದಾರೆ.
PublicNext
17/10/2024 08:07 am