ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈದುಂಬಿ ಹರಿದಿದೆ ಕೆರೆ

ಚಿತ್ರದುರ್ಗ : ಚಿತ್ರದುರ್ಗ ಅಂದ್ರೆ ಸಾಕು ಬರದ ನಾಡು ಎಂದು ಕರೆಯುತ್ತಿದ್ದ ಜನಗಳಿಗೆ ಈಗ ಸಮೃದ್ಧಿ ಮಳೆಯಾಗಿದೆ ಎನ್ನುವ ಕಾಲ ಬಂದೊದಗಿದೆ. ಜಿಲ್ಲೆಯ ಎಲ್ಲೆಡೆ ಕಳೆದ ಒಂದು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಖಾಲಿಯಾಗಿದ್ದ ಕೆರೆಗಳು ಬರ್ತಿಯಾಗಿ ಮೈದುಂಬಿ ಹರಿಯುತ್ತಿವೆ.

ಚಿತ್ರದುರ್ಗ ತಾಲೂಕಿನ ಆಲಘಟ್ಟ ಗ್ರಾಮದ ಸುಮಾರು 300ಕ್ಕೂ ಹೆಚ್ವು ಎಕರೆ ಪ್ರದೇಶದಲ್ಲಿ ಇರುವಂತಹ ಕೆರೆಯ ಸಂಪೂರ್ಣವಾಗಿ ಮೈದುಂಬಿ ಹರಿಯುತ್ತಿದೆ. ಕಳೆದ 4-5 ವರ್ಷಗಳಿಂದ ಕೆರೆಯು ಖಾಲಿಯಾಗಿ ಬಣಗೂಡುತ್ತಿತ್ತು, ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಕೆರೆ ಸಂಪೂರ್ಣವಾಗಿ ತುಂಬಿ ತುಳುಕಿ ಮೈದುಂಬಿ ಹರಿಯುತ್ತಿದೆ. ಗ್ರಾಮದ ಜನರೆಲ್ಲರೂ ಕೆರೆ ಮೈದುಂಬಿ ಹರಿಯುವುದನ್ನು ನೋಡಿ ಸಂತಸ ಪಟ್ಟಿದ್ದಾರೆ.

Edited By : Suman K
Kshetra Samachara

Kshetra Samachara

18/10/2024 01:52 pm

Cinque Terre

760

Cinque Terre

0

ಸಂಬಂಧಿತ ಸುದ್ದಿ