ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಜನರ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಸತತ ನಾಲ್ಕನೇ ದಿನವೂ ಕೂಡಾ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಗುರುವಾರ ಬೆಳಿಗ್ಗೆ 11 ಗಂಟೆಗೆ ಮಾಪನದ ವೇಳೆ 123.10 ಅಡಿಗೆ ತಲುಪಿದೆ. ಸತತ ಮೂರನೇ ದಿನವೂ 2426 ಕ್ಯೂಸೆಕ್ ಜಲಾಶಯಕ್ಕೆ ಹರಿದು ಬಂದಿದ್ದು, 130 ಎತ್ತರದ ಜಲಾಶಯದಲ್ಲಿ ಸದ್ಯ 123.10 ಅಡಿವರೆಗೆ ನೀರು ಬಂದಿದೆ. ಇನ್ನೂ 30 TMC ಸಾಮರ್ಥ್ಯದ ವಿವಿ ಸಾಗರದಲ್ಲಿ ಸದ್ಯ 26.64 TMC ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದ ಹೋಲಿಕೆ ಮಾಡಿದರೆ 122.10 ಅಡಿವರೆಗೆ ನೀರಿತ್ತು. ಕಳೆದ ವರ್ಷಕ್ಕಿಂತ 1 ಅಡಿ ಹೆಚ್ಚು ನೀರು ಬಂದಿದೆ. ಇನ್ನೂ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಯಾತ್ರೆ ಮುಂದುವರಿದ್ದು, ಇನ್ನಷ್ಟು ನೀರು ಹರಿದು ಬರುವ ನಿರೀಕ್ಷೆ ಇದೆ.
PublicNext
17/10/2024 03:48 pm