ಮೊಳಕಾಲ್ಮುರು: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ರೈತರ ಬದುಕು ತತ್ತರಗೊಂಡಿದೆ.
ಬಿಜಿಕೆರೆ ಗ್ರಾಪಂ ವ್ಯಾಪ್ತಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಗ್ರಾಮದ ಬೋಸಯ್ಯ,ಸಾರಯ್ಯ ಮತ್ತು ಮಲ್ಲೇಶ್ ಎಂಬುವ ರೈತರಿಗೆ ಸೇರಿದ ಮೆಕ್ಕೆಜೋಳ, ಬದನೆಕಾಯಿ ಸೌತೇಕಾಯಿ ಸೇರಿದಂತೆ ಸುಮಾರು ಐದಾರು ಎಕರೆಯ ನಾನಾ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು,ಮಳೆಯ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿದ್ದು,ಹೊಲಗಳು ಹೊಳೆಯಂತಾಗಿ ಮಾರ್ಪಟ್ಟಿವೆ.
ರೈತರ ನಿರೀಕ್ಷೆಯಂತೆ ಹಾಕಿದ್ದ ಬೆಳೆಯು ಇನ್ನೇನೂ ಫಸಲು ಕೈಗೆ ಸೇರುವ ಮುನ್ನವೇ ಮಳೆಯ ಅವಾಂತರಕ್ಕೆ ಬೆಳೆಗಳು ಕೊಚ್ಚಿ ಹೋಗಿದ್ದು ರೈತರಿಗೆ ಇನ್ನಿಲ್ಲದ ಸಂಕಷ್ಟ ಒದಗಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರೈತನಿಗೆ ಆದ ನಷ್ಟ ಪರಿಹಾರಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕಿದೆ.
PublicNext
18/10/2024 12:50 pm