ಬೈಲಹೊಂಗಲ: ಉಪಹಾರದ ಕೈಚೀಲಗೋಸ್ಕರ ಪರಸ್ಪರ ಮಾತಿನ ಚಕಮಕಿ ನಡೆದು ವೃದ್ಧನನ್ನ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕೊಲೆಯಾದ ವೃದ್ಧ ಬುಡರಕಟ್ಟಿ ಗ್ರಾಮದ ರುದ್ರಪ್ಪ ಶಿವಬಸಪ್ಪ ಪಾಗಾದ(64) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಅದೇ ಗ್ರಾಮದ ಮಲ್ಲಪ್ಪ ಶಿವಶಂಕರ ಯರಗೊಪ್ಪ(42) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನಲೆ: ರುದ್ರಪ್ಪ ಈತನು ತನ್ನ ಉಪಹಾರದ ಕೈಚೀಲವನ್ನು ಗ್ರಾ.ಪಂ ಕಟ್ಟೆಯ ಮೇಲೆ ಇಟ್ಟು ಇನ್ನೊರ್ವ ಕೂಲಿ ಕಾರ್ಮಿಕನನ್ನು ಕರೆಯಲು ಹೋದಾಗ ರುದ್ರಪ್ಪನ ಉಪಹಾರದ ಕೈಚೀಲವನ್ನೂ ಆರೋಪಿ ಮಲ್ಲಪ್ಪ ತೆಗೆದುಕೊಂಡು ಬುಡರಕಟ್ಟಿ ರಸ್ತೆಯ ಮೇಲೆ ಹೊರಡುವಾಗ, ರುದ್ರಪ್ಪ ತನ್ನ ಕೈಚೀಲವನ್ನೂ ಕಸಿದುಕೊಂಡಾಗ ಆರೋಪಿ ಮಲ್ಲಪ್ಪ ತನ್ನ ಕೈಯಲ್ಲಿದ್ದ ಕುಡಗೋಲಿನಿಂದ ಮುಖಕ್ಕೆ, ತಲೆಗೆ ಬಲವಾಗಿ ಹೊಡೆದ ಪರಿಣಾಮ ತೀವ್ರಗಾಯಗೊಂಡ ವೃದ್ಧ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಆರೋಪಿ ಮಲ್ಲಪ್ಪನನ್ನು ಬಂಧಿಸಲಾಗಿದೆ. ಈ ಕುರಿತು ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
15/10/2024 03:11 pm