ಹುಬ್ಬಳ್ಳಿ: ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ವಿರುದ್ಧ ಈಚೆಗೆ ಕೇಳಿಬಂದಿರುವ ಆರೋಪಗಳು ಆಧಾರ ರಹಿತವಾಗಿವೆ ಎಂದು ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ಅಧ್ಯಕ್ಷ ಬಾಬು ಭೂಸದ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ಅಧಿಕಾರಿಗಳು ಒದಗಿಸಿದ ಪಂದ್ಯಗಳ ಆಧಾರದ ಮೇಲೆ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತದೆ. ಪಂದ್ಯದ ಹಂಚಿಕೆಗಳ ಮೇಲೆ ಯಾವುದೇ ಪ್ರಭಾವವಿಲ್ಲ ಎಂದರು.
ಕೆಎಸ್ಸಿಎ ಸಂಯೋಜಿತ ಪಂದ್ಯಾವಳಿಯಾದ ಹುಬ್ಬಳ್ಳಿ ಪ್ರೀಮಿಯಮ್ ಲೀಗ್ (ಎಚ್ಪಿಎಲ್) ಎಲ್ಲ ಧಾರವಾಡ ವಲಯದ ಆಟಗಾರರಿಗೆ ಮುಕ್ತವಾಗಿದೆ. ಶುಲ್ಕವು ಕ್ರಿಕೆಟ್ ಅಭಿವೃದ್ಧಿಗೆ ನಿಧಿಯನ್ನು ಸಂಗ್ರಹಿಸುತ್ತದೆ ಮತ್ತು ಕ್ರಿಕೆಟಿಗರಿಗೆ ಕೌಶಲ ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ. ಟ್ರಸ್ಟ್ ಆಗಿ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ಕಡಿಮೆ ವಾರ್ಷಿಕ ಶುಲ್ಕವನ್ನು ವಿಧಿಸಿದೆ. ನಾವು ಹಿಂದುಳಿದ ಮತ್ತು ಅರ್ಹ ಆಟಗಾರರಿಗೆ ಶುಲ್ಕವನ್ನು ಮನ್ನಾ ಮಾಡಿದ್ದೇವೆ ಹಾಗೂ ಕಡಿಮೆಗೊಳಿಸಿದ್ದೇವೆ ಎಂದು ಅವರು ಹೇಳಿದರು.
2015ರಲ್ಲಿ ಪ್ರಾರಂಭವಾದ ಎಚ್ಪಿಎಲ್ ಧಾರವಾಡ ವಲಯದ ಅತ್ಯಂತ ಯಶಸ್ವಿ ಪಂದ್ಯಾವಳಿಯಾಗಿದೆ. ಫ್ಲಡ್ ಲೈಟ್ಗಳಲ್ಲಿ ಆಡುವ ಏಕೈಕ ಟೂರ್ನಿಯಾಗಿದೆ. ಆಟಗಾರರು ವಲಯ ಆಯ್ಕೆಗಾಗಿ ಮಾತ್ರ ಬಿಡಿಕೆಎಸ್ಎಫ್ಗೆ ಸೇರುತ್ತಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ತಮ್ಮ ಕ್ಲಬ್ನಲ್ಲಿ ನುರಿತ ತರಬೇತುದಾರರಿದ್ದಾರೆ. ಅವರಿಗೆ ಆಕರ್ಷಣೆಯಾಗಿ ಅವರ ಗರಡಿಯಲ್ಲಿ ತಾವು ಉತ್ತಮ ಆಟಗಾರರಾಗಬೇಕು ಎಂದು ತಮ್ಮ ಕ್ಲಬ್ಗೆ ಬರುತ್ತಾರೆ ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/09/2024 05:16 pm