ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ತಪ್ಪದ ಗುಂಡಿ ಗಂಡಾಂತರ : ಮತ್ತೆ ಬಾಯಿತೆರೆದ ಮೃತ್ಯು ಗುಂಡಿಗಳು ವಿಡಿಯೋ ವೈರಲ್

ಬೆಂಗಳೂರು : ಶತಾಯಗತಾಯ ಬೆಂಗಳೂರಿನಲ್ಲಿ ರಸ್ತೆ ಗುಂಡಿಯನ್ನು ಮುಚ್ಚುವ ಪಣತೊಟ್ಟು ಬಿಬಿಎಂಪಿ ಮಾಡಿದ ಕೆಲಸ ನೋಡಿದ್ರೆ ಎಂಥವರಿಗೂ ಸಿಟ್ಟು ಬರದೇ ಇರಲಾರದು. ಹೌದು ಮೃತ್ಯು ಗುಂಡಿಗಳಿಗೆ ಮುಕ್ತಿ ನೀಡಲು ಸರ್ಕಾರ ಸೆಪ್ಟೆಂಬರ್‌ 16 ರ ವರೆಗೆ ನೀಡಿದ್ದ ಡೆಡ್​ಲೈನ್ ಹಿನ್ನಲೆಯಲ್ಲಿ ತರಾತುರಿಯಲ್ಲಿ ಬಾರೀ ಕಸರತ್ತು ನಡೆಸಿ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.

ಸದ್ಯ ಅವಸರದ ಕಾಮಗಾರಿ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ. ವಿಬ್‌ಗ್ಯೋರ್ ಶಾಲಾ ರಸ್ತೆಯಲ್ಲಿ ಮಾಡಿದ ಗುಂಡಿ ಮುಚ್ಚುವ ಕೆಲಸ ಸಾವಿಗೆ ಆಹ್ವಾನ ನೀಡುವಂತಾಗಿದೆ. ಹರಿಬರಿಯಲ್ಲಿ ಮಾಡಿದ ತೇಪೆ ಕೆಲಸಕ್ಕೆ ಜನ ಗರಂ ಆಗಿದ್ದಾರೆ.

ಹರಿದ ರಸ್ತೆ ಸರಿಪಡಿಸುವ ಭರಾಟೆಯಲ್ಲಿ ಮಾಡಿದ ಅರ್ಧಂಬರ್ಧ ಕೆಲಸದಿಂದ ನಡು ರೋಡಿನಲ್ಲಿ ಗುಂಡಿಗಳು ರಾರಾಜಿಸುತ್ತಿವೆ. ಸದ್ಯ ಕಳಪೆ ಕೆಲಸದ ವಿಡಿಯೋವನ್ನು ವೈಟ್‌ಫೀಲ್ಡ್ ಟ್ರಾಫಿಕ್ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಸಂಚಾರ ಸಲಹೆ ರಸ್ತೆ ಪರಿಸ್ಥಿತಿ ಸರಿಯಿಲ್ಲ ನಿಧಾನಗತಿಯಲ್ಲಿ ಸಂಚರಿಸಿ ಎಂದು ಕ್ಯಾಷ್ಪನ್‌ ಬರೆದಿದ್ದಾರೆ. ಜೊತೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೆಲಸ (BWSSB) ಗೆ ಟ್ಯಾಗ್‌ ಮಾಡಿ ದಯವಿಟ್ಟು ಸಹಕರಿಸಿ ಎಂದಿದ್ದಾರೆ.

Edited By : Nirmala Aralikatti
PublicNext

PublicNext

18/09/2024 11:26 am

Cinque Terre

36.73 K

Cinque Terre

0

ಸಂಬಂಧಿತ ಸುದ್ದಿ