ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

(Exclusive)ಬೆಂಗಳೂರು : ಐಪಿಎಸ್ ವೃತ್ತಿ ಬಿಟ್ಟು ಆಧ್ಯಾತ್ಮದತ್ತ ನಡಿಗೆ ಹಾಕಿದ್ದ ಅಧಿಕಾರಿ ವಾಪಸ್

ಬೆಂಗಳೂರು: ನಗರದ ಡಿಸಿಪಿ ರ‍್ಯಾಂಕ್‌ ಐಪಿಎಸ್ ಅಧಿಕಾರಿಯೊಬ್ಬರು ನಿನ್ನೆ ಡ್ಯೂಟಿಯನ್ನ ಅರ್ಧಕ್ಕೆ ಬಿಟ್ಟು ಆಧ್ಯಾತ್ಮತ್ತ ಹೋಗಿದ್ದಾರೆ ಎನ್ನಲಾಗ್ತಿದೆ. ನಿನ್ನೆ ಕಮಿಷನರ್ ವಾರದ ಸಭೆಯಲ್ಲಿ ಭಾಗಿಯಾಗಿದ್ದ ಆ ಅಧಿಕಾರಿ ಮಧ್ಯಾಹ್ನ ಸಭೆ ಮುಗಿಸಿ ನೇರವಾಗಿ ಮನೆಗೆ ತೆರಳಿದ್ರಂತೆ.

ಮನೆಯಲ್ಲಿ ಫಾರ್ಮಲ್ ಬಟ್ಟೆ ಬದಲಿಸಿ ಪಂಚೆ ಶರ್ಟ್ ಧರಿಸಿದ ಆ ಅಧಿಕಾರಿ ಸರ್ಕಾರಿ ವಾಹನದಲ್ಲೆ ನೇರವಾಗಿ ಏರ್‌ಪೋರ್ಟ್‌ ಬಳಿಗೆ ಡ್ರಾಪ್ ತೆಗೆದುಕೊಂಡಿದ್ದಾರೆ. ಇಲ್ಲಿ ತಮ್ಮ ಸಿಬ್ಬಂದಿಗೆ ಇಲಾಖೆಯ ಐಡಿ ಕಾರ್ಡ್ ಮೊಬೈಲ್ ನೀಡಿ ನನಗೆ ಈ ಲೌಕಿಕ ಜೀವನ ಸಾಕು ನಾನು ಬೇರೆ ಜೀವನ ನಡೆಸಬೇಕು ಅಂತ ಹೇಳಿಕೊಂಡು ತಾವು ಅಲ್ಲೆ ಉಳಿದುಕೊಂಡು ಸಿಬ್ಬಂದಿ ವಾಪಸ್ ಕಳುಹಿಸಿದ್ದಾರಂತೆ.

ಆ ಅಧಿಕಾರಿ ಕುರಿತಂತೆ ಪೊಲೀಸರು ಕೂಡ ಹುಡುಕಾಟ ನಡೆಸಿದ್ದರು. ಸದ್ಯ ಆ ಅಧಿಕಾರಿ ಕೆಲವರ ಸಂಪರ್ಕಕ್ಕೆ ಸಿಕ್ಕಿದ್ದು, ಮೌನವೃತಕ್ಕೆ ಜಾರಿ ಧ್ಯಾನಮಗ್ನರಾಗಿದ್ರು ಎಂದು ತಿಳಿದು ಬಂದಿದೆ.

Edited By : Abhishek Kamoji
PublicNext

PublicNext

18/09/2024 08:12 am

Cinque Terre

17.64 K

Cinque Terre

1

ಸಂಬಂಧಿತ ಸುದ್ದಿ