ಹಾವೇರಿ: ಈದ್ ಮಿಲಾದ್ ಆಚರಣೆ ಭಾವೈಕ್ಯತೆಗೆ ಸಾಕ್ಷಿಯಾದ ಸಂಗತಿ ಹಾವೇರಿ ತಾಲೂಕು ನೆಗಳೂರು ಗ್ರಾಮದಲ್ಲಿ ನಡೆದಿದೆ. ಈದ್-ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಗಣೇಶ ಮೂರ್ತಿಗೆ ಮುಸ್ಲಿಂ ಬಾಂಧವರು ಪೂಜೆ ಸಲ್ಲಿಸುವ ಮೂಲಕ ಕೋಮು ಸಾಮರಸ್ಯ ಮೆರೆದಿದ್ದಾರೆ.
ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಿರುವ ಸರ್ವಧರ್ಮ ಮಹಾಗಣಪತಿಗೆ ಹಿಂದೂ-ಮುಸ್ಲಿಂ ಬಾಂಧವರು ಪೂಜೆ ಸಲ್ಲಿಸಿದರು. ನೀನೆ ರಾಮಾ, ನೀನೆ ಅಲ್ಲಾ, ನೀನೆ ಏಸು ಅನ್ನೋ ಹಾಡಿಗೆ ಹಿಂದೂ- ಮುಸ್ಲಿಂ ಯುವಕರು ಧ್ವನಿಗೂಡಿಸಿದರು.
ಆ ಮೂಲಕ ಗ್ರಾಮಸ್ಥರು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದರು. ಎರಡು ಕೋಮುಗಳ ಜನರ ಈ ನಡೆ ಇತರ ಗ್ರಾಮಗಳ ಜನರಿಗೆ ಮಾದರಿಯಾಯಿತು.
PublicNext
16/09/2024 09:22 pm