ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಕಾವು ಜೋರಾಗಿದೆ. ಶಿಗ್ಗಾವಿಯಲ್ಲಿ ಬಿಜೆಪಿ ಸಂಘಟನಾತ್ಮಕ ಸಭೆ ನಡೆಸಲಾಗಿದ್ದು, ಟಿಕೆಟ್ಗಾಗಿ ಬಿಜೆಪಿ ಮುಖಂಡರು ಮುಗಿ ಬಿದ್ದಿದ್ದು, ಟಿಕೆಟ್ಗಾಗಿಯೇ 60 ಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಯಾಗಿರುವ ಮಾಹಿತಿ ಬಹಿರಂಗಗೊಂಡಿದೆ.
ಶಿಗ್ಗಾವಿಗೆ ಆಗಮಿಸಿರುವ ಮಾಜಿ ಸಚಿವ ಬಿ.ಸಿ.ಪಾಟೀಲ, ಶಾಸಕ ಮಹೇಶ ತೆಂಗಿನಕಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ಗೆ ಮನವಿ ಸಲ್ಲಿಸಿದ ಟಿಕೆಟ್ ಆಕಾಂಕ್ಷಿಗಳು. ಟಿಕೆಟ್ಗೆ ಭರ್ಜರಿ ಪೈಟ್ ನಡೆಸಿದ್ದಾರೆ. ಟಿಕೆಟ್ಗಾಗಿ ಕಮಲ ಮುಖಂಡರಿಂದ ಅರ್ಜಿ ಸಲ್ಲಿಕೆಯನ್ನು ನೋಡಿ ಬಿಜೆಪಿ ವೀಕ್ಷಕರು ದಂಗಾಗಿದ್ದಾರೆ.
ಶ್ರೀಕಾಂತ್ ದುಂಡಿಗೌಡರ, ಭರತ ಬೊಮ್ಮಾಯಿ, ಶೋಭಾ ನಿಸ್ಸೀಮಗೌಡರ, ಶಶಿಧರ ಯಲಿಗಾರ ಸೇರಿದಂತೆ 60 ಕ್ಕು ಹೆಚ್ಚು ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, ಆದರೇ ಅರ್ಜಿ ಸಲ್ಲಿಕೆಗೆ ಬಾರದ ಬೊಮ್ಮಾಯಿ ಪುತ್ರ ಭರತ ಬೊಮ್ಮಾಯಿನ ಪರ ಬೆಂಬಲಿಗರಿಂದ ಅರ್ಜಿ ಸಲ್ಲಿಕೆಯಾಗಿದೆ. ಟಿಕೆಟ್ ನೀಡುವಂತೆ ಶ್ರೀಕಾಂತ್ ದುಂಡಿಗೌಡರ ಬೆಂಬಲಿಗರಿಂದ ಶಕ್ತಿ ಪ್ರದರ್ಶನ ಮಾಡಿದ್ದು, ಶಿಗ್ಗಾವಿ ಚೆನ್ನಮ್ಮ ವೃತ್ತದಲ್ಲಿ ಸೇರಿದ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡಿದ್ದಾರೆ.
PublicNext
13/09/2024 07:05 pm