ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನಾಗಮಂಗಲ ಗಲಭೆ ಪೂರ್ವ ನಿಯೋಜಿತ - ಮುತಾಲಿಕ್

ಹಾವೇರಿ; ನಾಗಮಂಗಲ ಗಲಭೆ ಮುಸ್ಲಿಂ ಕಿಡಿಗೇಡಿಗಳಿಂದ ಆಗಿದೆ. ಚಪ್ಪಲಿ, ಚಾಕು, ಚೂರಿ ಹಿಡಿದುಕೊಂಡು ಓಡಾಡಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಮಸೀದಿ ಗಲಾಟೆ ಮಾಡುವ ಸೆಂಟರ್ ಆಗಿದೆ. ಹಿಂದೂಗಳು ಮುಸ್ಲಿಂ ಬಹಿಷ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಯಾವುದೇ ವ್ಯವಹಾರ ವಹಿವಾಟು ಮಾಡಬಾರದು. ಸಾರ್ವಜನಿಕ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೊರಟಿದ್ದಾಗ ಗಲಾಟೆ ಆಗಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂರನ್ನ ತಲೆ ಮೇಲೆ ಕೂರಿಸಿಕೊಂಡಿದೆ ಎಂದು ಮುತಾಲಿಕ್ ಆರೋಪಿಸಿದರು.

ಕಳೆದ ವರ್ಷ ಗಲಾಟೆ ಆಗಿತ್ತು. ಪೊಲೀಸರು ಏಕೆ ಎಚ್ಚೆತ್ತುಕೊಂಡು ಬಿಗಿ ಬಂದೋಬಸ್ತ್ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಘಟನೆ ಹಿನ್ನೆಲೆಯಲ್ಲಿ ಚಲುವರಾಯಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಗಲಾಟೆಗೆ ಚಲುವರಾಯಸ್ವಾಮಿ ಕಾರಣ ಎಂದು ಮುತಾಲಿಕ್ ಆರೋಪಿಸಿದರು.

Edited By : Nagesh Gaonkar
PublicNext

PublicNext

12/09/2024 04:14 pm

Cinque Terre

20.42 K

Cinque Terre

3

ಸಂಬಂಧಿತ ಸುದ್ದಿ