ಹಾವೇರಿ : ಮಹದಾಯಿ ಯೋಜನೆಗೆ ಯಾರಾದರೂ ಹಿನ್ನೆಡೆ ಮಾಡಿದ್ದರೇ ಅದು ಕಾಂಗ್ರೆಸ್ ಪಕ್ಷ ಎಂದು ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು 2009 ರಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವದಿಲ್ಲಾ ಎಂದು ಅಂದಿನ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಸೋನಿಯಾ ಗಾಂಧಿ ಹೇಳಿಕೆಯಿಂದ ಹಿಡಿದು ಟ್ರಬ್ಯೂನಲ್ ಮಾಡುವ ಅವಶ್ಯಕತೆ ಇರಲಿಲ್ಲಾ ಟ್ರಬ್ಯೂನಲ್ ಮಾಡಿದರು ಎಂದು ಬೊಮ್ಮಾಯಿ ಆರೋಪಿಸಿದರು.
ಟ್ರಬ್ಯೂನಲ್ ಮಾಡಿ ಅದರ ಚೇರಮ್ಮನ್ರಿಗೆ ಒಂದು ಕಚೇರಿ ನೀಡಲಿಲ್ಲಾ. ಅದಕ್ಕೆ ನಾಲ್ಕೈದು ವರ್ಷ ವಿಳಂಬ ಮಾಡಿದರು ಎಂದು ಬಸವರಾಜ್ ಬೊಮ್ಮಾಯಿ ಆರೋಪಿಸಿದರು. ಅವರು ನಿರ್ಮಿಸಿದ ಟ್ರಬ್ಯೂನಲ್ಗೆ ತಾವೇ ಬರೆದುಕೊಟ್ಟು ನಾವು ನಿರ್ಮಿಸಿದ ಇಂಟರನಲ್ ಲಿಂಕಿಂಗ್ ಕೆನಲ್ಗೆ ಗೋಡೆ ಕಟ್ಟಿದರು. ಇದಲ್ಲೆವೂ ಇತಿಹಾಸದಲ್ಲಿದೆ ಈಗ ವನ್ಯಜೀವಿ ಪ್ರಾಧಿಕಾರದಲ್ಲಿದೆ ಅದಕ್ಕೆಲ್ಲಾ ಸೂಕ್ತ ದಾಖಲಾತಿ ನೀಡಿದರೆ ಮಹದಾಯಿ ಯೋಜನೆಗೆ ನಮಗೆ ಒಪ್ಪಿಗೆ ಸಿಗುತ್ತದೆ.
ರಾಜ್ಯಪಾಲರು ರಾಜ್ಯ ಸರ್ಕಾರ ಕಳಿಸಿರುವ 11 ವಿದೇಯಕ ವಾಪಸ್ ಕಳಿಸಿರುವ ಬಗ್ಗೆ ರಾಜ್ಯ ಸರ್ಕಾರ ಕಾನೂನು ಹೋರಾಟ ಮಾಡಲು ಮುಂದಾದ ಕುರಿತಂತೆ ಮಾತನಾಡಿದ ಅವರು ಕಾನೂನು ಹೋರಾಟ ಮಾಡಲಿ ಎಂದು ತಿಳಿಸಿದರು. ಕಾನೂನು ಹೋರಾಟ ಮಾಡುವ ಅಧಿಕಾರ ಎಲ್ಲರಿಗೂ ಇದೆ ಕಾನೂನು ಹೋರಾಟ ಮಾಡಲಿ ಎಂದು ತಿಳಿಸಿದರು. ಶರಾವತಿ ನದಿ ನೀರನ್ನ ಬೆಂಗಳೂರಿಗೆ ತಗೆದುಕೊಂಡು ಹೋಗುವ ಯೋಜನೆ ಬಗ್ಗೆ ನಾನು ಯಾವುದೇ ಟಿಪ್ಪಣೆ ಮಾಡುವದಿಲ್ಲಾ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.
PublicNext
08/09/2024 03:56 pm