ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಜೂಜು ಅಡ್ಡದ ಮೇಲೆ‌ ಪೊಲೀಸರ ದಾಳಿ - 3 ಜನರ‌ ಬಂಧನ

ಮುಳಬಾಗಿಲು: ಮುಳಬಾಗಿಲು ಗ್ರಾಮಾಂತರ ಪೊಲೀಸರ ‌ಜೂಜು ಅಡ್ಡೆ ಮೇಲೆ‌ ದಾಳಿ ಮಾಡಿ‌ ‌3 ಜನರನ್ನು ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆದಿದೆ.‌

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಬಳಿಯ ರಾಮಾಪುರ ಗ್ರಾಮದ ಕೆರೆಯ ಅಂಗಳದಲ್ಲಿ 3 ಮಂದಿಯ ಗುಂಪೊಂದು ಇಸ್ಪೀಟು ಆಡುತ್ತಿದ್ದು, ಖಚಿತ ಮಾಹಿತಿ‌ ಮೇರೆಗೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ ಐ ಕುಮಾರಿ ಮಮತ ನೇತೃತ್ವದ ಸಿಬ್ಬಂದಿ ‌ತಂಡ‌ ದಾಳಿ ನಡೆಸಿ ಅಮುಜಾನ್, ಮಂಜುನಾಥ್, ವೆಂಕಟೇಶಪ್ಪ ಎಂಬುವರನ್ನು ಬಂಧಿಸಿ, ಪಣಕ್ಕೆ ಇಟ್ಟಿದ್ದ 5200 ರೂಪಾಯಿ‌ ನಗದು‌ ಹಣವನ್ನು ವಶಪಡಿಸಿ ಕೊಂಡಿದೆ.‌ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

05/02/2025 11:46 am

Cinque Terre

100

Cinque Terre

0

ಸಂಬಂಧಿತ ಸುದ್ದಿ