ಮುಲ್ಕಿ: ಕಿಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯು ಪಂಚಾಯತ್ ಸಭಾಭಾವನದಲ್ಲಿ ನಡೆಯಿತು.
ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಪಂಚಾಯತ್ ಅಧ್ಯಕ್ಷ ವಿಕಾಸ್ ಶೆಟ್ಟಿ ಮಾತನಾಡಿ ವಿಶೇಷ ಚೇತನರ ನೋವಿನಲ್ಲಿ ನಾವೂ ಬಾಗಿಗಳು ಹಾಗೂ ಸರಕಾರದ ಸವಲತ್ತು ಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಈ ಸಂದರ್ಭ ಗ್ರಾಮದ 42 ವಿಶೇಷ ಚೇತನರಿಗೆ ವೈಯುಕ್ತಿಕ ಸೌಲಭ್ಯ ವನ್ನು ಪಂಚಾಯತ್ ವತಿಯಿಂದ ವಿತರಿಸಲಾಯಿತು. ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಪಂಚಾಯತ್ ಸದಸ್ಯರಾದ ಲೀಲಾವತಿ, ದಿನೇಶ್ ಆಚಾರ್ಯ, ಶಾಂತ ಹಾಗೂ ವಿಶೇಷ ಚೇತನ ಸಮನ್ವಯ ಸಿಬ್ಬಂದಿ ಆಯೇಷಾ ಉಪಸ್ಥಿತರಿದ್ದರು.
Kshetra Samachara
04/02/2025 04:29 pm