ಕುಂದಗೋಳ : ಗೂಡ್ಸ್ ವಾಹನ ಮತ್ತು ದ್ವಿಚಕ್ರ ವಾಹನದ ಮದ್ಯೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಾಯಗಳಾದ ಘಟನೆ ತರ್ಲಘಟ್ಟ ಹುಲಗೂರ ರಸ್ತೆ ಹನುಮಾನ್ ದೇವಸ್ಥಾನದ ಬಳಿ ನಡೆದಿದೆ.
ಹೌದು ! ನೆಲಗುಡ್ಡ ಗ್ರಾಮದ ಹದ್ದಿನ ತರ್ಲಘಟ್ಟ ಹುಲಗೂರ ರಸ್ತೆ ಬಳಿ ಹನುಮಾನ್ ದೇವಸ್ಥಾನದ ಹತ್ತಿರ ಶಬ್ಬೀರ್ ಗರೀಬಸಾಬ್ ಹಂಚಿನಾಳ ಎಂಬಾತ ತನ್ನ ಗೂಡ್ಸ್ ವಾಹನ ತೆಗೆದುಕೊಂಡು ಯಾವುದೇ ಹಾರ್ನ್ ಮುನ್ಸೂಚನೆ ನೀಡದೆ ತರ್ಲಘಟ್ಟ ಕಡೆಯಿಂದ ಹುಲಗೂರು ಕಡೆ ಅತಿ ವೇಗವಾಗಿ ನಡೆಸಿಕೊಂಡು ಎದುರಿಗೆ ಬರುತ್ತಿದ್ದ ಬೈಕ್ ಸವಾರ ಜಂಗ್ಲಿಸಾಬ್ ಹಜರೆಸಾಬ್ ಸುಂಕದ ಎಂಬುವವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯ ಪಡಿಸಿದ್ದಾನೆ.
ಇದಲ್ಲದೆ ದ್ವಿಚಕ್ರ ವಾಹನ ಜಖಂಗೊಳಿಸಿದ ಬಗ್ಗೆ ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಫೆಬ್ರವರಿ 2 ರಂದು ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kshetra Samachara
04/02/2025 02:02 pm