ಮುಂಡಗೋಡ : ಮನೆ ಕಳ್ಳತನ ಮಾಡಿದ ಆರೋಪಿಗಳಾದ ಮುಂಡಗೋಡ ಸುಭಾಶನಗರದ ಪ್ರವೀಣ ಬಸವರಾಜ ಭೋವಿ (23) ಹಾಗು ಕ್ಯಾಸನಕೇರಿಯ ರಾಕೇಶ ಹನಮಂತ ಹೆಬ್ಬಳ್ಳಿ ಇವರನ್ನು ಬಂಧಿಸಿ ಇವರಿಂದ ಸುಮಾರು 60 ಸಾವಿರ ರೂ ಬೆಲೆಯ 10 ಗ್ರಾಂ ಬಂಗಾರದ ಅಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮುಂಡಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳು ವಡ್ಡರಕೇರಿಯ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಡೈನಾಮಿಕ್ ಎಸ್ಪಿ ನಾರಾಯಣ ಎಂ ಮಾರ್ಗದರ್ಶನ, ಡಿವಾಯಸ್ಪಿ ಗಣೇಶ ಕೆ ಎಲ್ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಪಿಐ ರಂಗನಾಥ ನೀಲಮ್ಮನವರ್, ಪಿಎಸ್ಐಗಳಾದ ಪರಶುರಾಮ ಮಿರ್ಜಗಿ,ಹನುಮಂತ ಗುಡಗಂಟಿ ಸಿಬ್ಬಂದಿಗಳಾದ ಮಂಜಪ್ಪಚಿಂಚಲಿ,ಕೋಟೇಶ್ವರ ನಾಗರವಳ್ಳಿ,ಅಣ್ಣಪ್ಪ ಬಡಿಗೇರ್,ತಿರುಪತಿ ಚೌಡಣ್ಣನವರ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Kshetra Samachara
03/02/2025 05:07 pm