ಮಂಡ್ಯ; ನಗರದ ಮಹಾವೀರ ಸರ್ಕಲ್ನಿಂದ ಜೈನ್ ಸ್ಟ್ರೀಟ್ ಕಡೆಗೆ ಹೋಗುವ ರಸ್ತೆಯಲ್ಲಿರುವ 'ಅಂಡರ್ಬ್ರಿಡ್ಜ್ ಕಾಮಗಾರಿ ಕಳಪೆ - ತಪ್ಪದು ಸವಾರರಿಗೆ ನರಕ ಯಾತನೆ' ಎಂಬ ತಲೆ ಬರಹದಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನ ಇಂದು ಮದ್ಯಾಹ್ನ ಎರಡು ಗಂಟೆಗೆಬಿತ್ತರಿಸಿತ್ತು.
ಇದಕ್ಕೆ ಎಚ್ಚೆತ್ತ ಅಧಿಕಾರಿಗಳು ಸಂಜೆ ಆರು ಗಂಟೆ ಹೊತ್ತಿಗೆ ದೀಪಗಳು ಜಗಮಗಿಸುವಂತೆ ಮಾಡಿದ್ರು. ಅಷ್ಟೇ ಅಲ್ಲ, ಅಲ್ಲಿ ಸಂಗ್ರಹವಾಗುತ್ತಿದ್ದ ನೀರನ್ನ ಖಾಲಿ ಮಾಡಿಸಿ ಅದು ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿಸಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲೂ ಸಂತಸ ವ್ಯಕ್ತವಾಗಿದೆ. ಪಬ್ಲಿಕ್ ನೆಕ್ಸ್ಟ್ ಬಗ್ಗೆ ಹೆಮ್ಮಪಟ್ಟಿದ್ದಾರೆ.
PublicNext
13/01/2025 10:21 pm