ಬೆಂಗಳೂರು: ನಾಳೆ ಆರೆಂಜ್ ಅಲರ್ಟ್ ಅಂತ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರಿನಲ್ಲಿ ಇದೇ ಕಾರಣಕ್ಕೆ ನಗರ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. ಸದ್ಯ ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಕ್ಯಾಮ್ಸ್ ಖಾಸಗಿ ಶಾಲೆಗಳ ಒಕ್ಕೂಟ ಜಿಲ್ಲಾಧಿಕಾರಿಗಳ ನಿರ್ಧಾರ ವಿರೋಧ ಮಾಡಿದ್ದಾರೆ.
ಎಲ್ಲಿ ಸಮಸ್ಯೆ ಇದೇ ಆ ಭಾಗಕ್ಕೆ ರಜೆ ಕೊಡೋದ್ರಲ್ಲಿ ಅರ್ಥವಿದೆ.ಮಳೆ ಬಾರದೆ ಇರುವ ಕಡೆ ಕೂಡ ರಜೆ ಕೊಟ್ಟಿರುವುದು ಸರಿ ಅಲ್ಲ. ದಸರಾ ಹಬ್ಬ ಅಂತ ಮಕ್ಕಳಿಗೆ ರಜೆ ಸಿಕ್ತು.ಇನ್ನು ದೀಪಾವಳಿ ರಜೆ ಬರುತ್ತೆ.ಈ ಮಧ್ಯೆ ಮತ್ತೆ ಮಳೆ ಅಂತ ರಜೆ ಕೊಡ್ತಾ ಇರೋದು ಮಕ್ಕಳು ಶೈಕ್ಷಣಿಕ ಜೀವನದಿಂದ ವಂಚಿತರದಂತೆ ಕಾಣಿಸ್ತಾ ಇದೆ ಅಂತ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕಿಡಿ ಕಾರಿದ್ದಾರೆ.
PublicNext
22/10/2024 09:05 pm