ಬೆಂಗಳೂರು: ಬೆಳಿಗ್ಗೆಯಿಂದ ಕೊಂಚ ಗ್ಯಾಪ್ ಕೊಟ್ಟಿದ್ದ ಮಳೆರಾಯ ಸಂಜೆ ವೇಳೆ ಮತ್ತೆ ಸುರಿಯಲು ಆರಂಭಿಸಿದ್ದಾನೆ. ವರುಣನ ಆರ್ಭಟದಿಂದ ನಗರದ ಹಲವೆಡೆ ರಸ್ತೆ ಜಲಾವೃತವಾಗಿವೆ. ಚೆನ್ನಸಂದ್ರದ ಸಮೀಪದ ಟಿ ಕ್ರಾಸ್ನಲ್ಲಿ ವಾಹನ ಸವಾರರು ರಸ್ತೆ ಹುಡುಕುವ ಪರಿಸ್ಥಿತಿ ಎದುರಾಗಿದೆ. ಸಂಜೆ ಮೇಲೆ ಶುರುವಾದ ಮಳೆಯಿಂದ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ವಾಹನ ಸವಾರರಿಗೆ ರಸ್ತೆಯ ಬದಲು ಎಲ್ಲಿ ನೋಡಿದ್ರೂ ಕೆಂಪು ನೀರು ಕಾಣುಸುತ್ತಿದೆ.
PublicNext
22/10/2024 10:09 pm